ಬಹುಜನ ಭಾರತ

Author : ವಿ. ಮುನಿವೆಂಕಟಪ್ಪ

Pages 119

₹ 110.00




Year of Publication: 2019
Published by: ವಿದ್ಯಾ ವಿಶಾರದ ಪ್ರಕಾಶನ
Address: #246 ಬಿ. ಪ್ಲಾಟ್ ಸಂಖ್ಯೆ 16, ನಿಸರ್ಗ ಬಡಾವಣೆ, ವಿವೇಕಾನಂದ ನಗರ, ರಿಂಗ್ ರಸ್ತೆ ಬಳಿ, ಗದಗ-582101
Phone: 8558202555

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಬಹುಜನ ಭಾರತ. ಬಹುಸಂಖ್ಯಾತರ ಭಾರತವಾಗಿದ್ದರೂ ಕೆಲವೇ ಕಲವು ಜಾತಿ ಜನರು ಇಲ್ಲಿಯ ಎಲ್ಲ ರೀತಿಯ ಸಂಪತ್ತನ್ನು ಅನುಭವಿಸುತ್ತಿದ್ದಾರೆ. ಬುದ್ಧನ ಕಾಲದಿಂದ ಹಿಡಿದು ಇಂದಿಗೂ ಈ ಸಂಚು ಮುಂದುವರಿದಿದೆ. ಈ ಕುತಂತ್ರದ ವಿರುದ್ಧ ಬುದ್ಧ, ಬಸವ ಹಾಗೂ ಆಂಬೇಡ್ಕರ್ ಸೇರಿದಂತೆ ತಮ್ಮ ಮಿತಿ ಮೀರಿ ಶ್ರಮಿಸಿ, ಹತ್ತು ಹಲವು ಚಳವಳಿಗಳನ್ನು ವಿವಿಧ ಹಂತದಲ್ಲಿ ಹುಟ್ಟು ಹಾಕಿದರು. ಈ ಕೃತಿಯಲ್ಲಿಒಟ್ಟು 27 ಲೇಖನಗಳಿದ್ದು, ವಿಷಯ ವಸ್ತು, ಚಿಂತನಾ ರೀತಿ ದೃಷ್ಟಿಯಿಂದ ಇವೆಲ್ಲವೂ ಸಂಶೋಧನೆಗೆ ಪೂರಕವಾಗಿವೆ. ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲರು ಬೆನ್ನುಡಿ ಬರೆದು ‘ಬಹುಜನ ಭಾರತದ ಚಿತ್ರಣವನ್ನು ಸ್ಪಷ್ಟವಾಗಿ ಈ ಕೃತಿಯ ಮೂಲಕ ಕಟ್ಟಿಕೊಟ್ಟಿರುವ ಲೇಖಕರ ಶ್ರಮ ಶ್ಲಾಘನೀಯ’ ಎಂದು ಪ್ರಶಂಶಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books