ಕೊರೋನ ನಂತರದ ಗ್ರಾಮ ಭಾರತ

Author : ನರೇಂದ್ರ ರೈ ದೇರ್ಲ

Pages 128

₹ 150.00




Year of Publication: 2020
Published by: ಕನಸು ಪ್ರಕಾಶನ
Address: ಮಡವು ಪೋಸ್ಟ್, ಪುತ್ತೂರು ತಾಲೂಕು, ದಕ್ಷಿಣ ಕನ್ನಡ
Phone: 9164561789

Synopsys

‘ಕೊರೋನ ನಂತರದ ಗ್ರಾಮ ಭಾರತ’ ಲೇಖಕ ನರೇಂದ್ರ ರೈ ದೇರ್ಲ ಅವರ ಲೇಖನ ಸಂಕಲನ. ಕೃಷಿಯೊಂದೇ ಸತ್ಯ, ಉಳಿದಿದ್ದೆಲ್ಲಾ ಮಿಥ್ಯೆ. ಎಂಬ ಮಾತು ಅಕ್ಷರಶಃ ಸತ್ಯ ಅನ್ನಿಸುವುದು ಸಂಕಷ್ಟದ ಸಮಯಗಳಲ್ಲೇ ಹಾಗೇ ಕೊರೋನ ಕಾಲದಲ್ಲಿ ಸಹ ಈ ಮಾತು ಸತ್ಯವೆನಿಸಿದೆ. ಇಂಥಹ ಸತ್ಯದರ್ಶನಗಳನ್ನು ನೀಡುವುದು ಈ ಕೃತಿ.

ಎಲ್ಲರನ್ನೂ ಆಳ ಚಿಂತನೆಗೆ ಹಚ್ಚಬಲ್ಲ ಕೃತಿ. ಆಡಳಿತದ ಮಂದಿ, ಶಿಕ್ಷಣ ತಜ್ಞರು, ಅಧ್ಯಾಪಕರು, ಅಷ್ಟೇ ಏಕೆ, ದೇಶದ ಎಲ್ಲಾ ವಿದ್ಯಾರ್ಥಿಗಳು ಇದನ್ನು ಓದಬೇಕು ಎನ್ನುತ್ತಾರೆ ಶ್ರೀಪಡ್ರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಕೃತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೇರ್ಲರ ಕೃತಿ ಕಬ್ಬಿನಂತೆ, ಜಗಿದರಷ್ಟೇ ಸಿಹಿ ಸ್ರವಿಸುತ್ತದೆ. ಇಲ್ಲಿರುವುದು ಎಲ್ಲವೂ ಸಿಹಿಯೇ ಅಲ್ಲ. ಕಹಿಯೂ ಇದೆ. ಉತ್ತರ ಕಾಣದ ಮಹತ್ವದ ಪ್ರಶ್ನೆ ವಾಸ್ತವಗಳೂ ಇವೆ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Conversation

Related Books