ಅಂಕುಶವಿಲ್ಲದ ನಡೆ

Author : ಚಿನ್ನಸ್ವಾಮಿ ಡಿ

Pages 140

₹ 100.00




Year of Publication: 2021
Published by: ನಂದಿತ ಪ್ರಕಾಶನ
Address: #117, ಬಿಲ್ಲವ ನಿಲಯ, ಎ ಝೋನ್, 3 ನೇ ಹಂತ, ಜೆ.ಪಿ ನಗರ ಮೈಸೂರು.
Phone: 8904431029

Synopsys

’ಅಂಕುಶವಿಲ್ಲದ ನಡೆ’ ಲೇಖಕ ಚಿನ್ನಸ್ವಾಮಿ ಡಿ ಅವರ ವಿಮರ್ಶೆ ಮತ್ತು ವೈಚಾರಿಕ ಲೇಖನಗಳನ್ನು ಒಳಗೊಂಡ ಕೃತಿಯಾಗಿದೆ. ಒಟ್ಟು 14 ಲೇಖನಗಳಿವೆ. ಬಸವಣ್ಣ. ಮರುಳಸಿದ್ಧ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಮುಳ್ಳೂರು ನಾಗರಾಜು, ಡಾ.ಸಿದ್ಧಲಿಂಗಯ್ಯ ಹಾಗೂ ತುಕಾರಾಂ ಅವರ ಬದುಕು-ಬರಹಗಳನ್ನೊಳಗೊಂಡಿವೆ. ಅಲ್ಲದೆ, ದುಡಿಮೆಯಲ್ಲಿಯ ಮಹಿಳೆಯರ ಸ್ಥಿತಿ-ಗತಿಗಳು ಹಾಗೂ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರಚಿತ್ರಣಕ್ಕೆ ಸಂಬಂಧಪಟ್ಟ ವಿಶೇಷ ಲೇಖನಗಳು ಸೇರ್ಪಡೆಯಾಗಿವೆ.

ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ರಾಜಶೇಖರ ಜಮದಂಡಿ ‘ಇಲ್ಲಿಯ ಲೇಖನಗಳನ್ನು ನಾನು ಗಮನಿಸಿದಂತೆಯೆ ಚಿನ್ನಸ್ವಾಮಿ ಅವರಲ್ಲಿ ನಿರಂತರ ಅಧ್ಯಯನ ಮತ್ತು ಬರವಣಿಗೆ ಕಂಡುಬರುತ್ತದೆ. ಪ್ರತಿ ಲೇಖನ ಸಿದ್ಧಪಡಿಸುವಲ್ಲಿ ಪೂರಕ ಮಾಹಿತಿಗಳು ಸಂಗ್ರಹಣೆ, ವಿಶ್ಲೇಷಣೆ. ವಿವರಣೆಗಳು ಅಗತ್ಯಕ್ಕನುಗುಣವಾಗಿ ಒದಗಿಸಿದ್ದಾರೆ. ಆಯಾ ಲೇಖನಗಳ ಕೊನೆಯಲ್ಲಿ ನೀಡಿರುವ ಕೃತಿಗಳ ಪಟ್ಟಿ ಅವರ ಗಂಭೀರ ಓದಿಗೆ ಸಾಕ್ಷಿಯಾಗಿವೆ. ಬಸವಣ್ಣನವರ ಬಗೆಗಿರುವ ಅವರ ಆರಂಭದ ಲೇಖನವು 12ನೇ ಶತಮಾನದ ವಾಸ್ತವ ಚಿತ್ರಣದೊಂದಿಗೆ ಅನಾವರಣಗೊಂಡಿದೆ. ಪ್ರಸ್ತುತ, ವಚನಗಳ ಅಧ್ಯಯನವೆಂದರೆ, ಮುಂದಾಲೋಚನೆಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಎಂದರ್ಥ. ಶರಣರ ಶಿಸ್ತುಬದ್ಧ ಕಾಯಕ-ದಾಸೋಹಗಳು ಇಂದಿಗೂ ದಾರಿದೀಪವಾಗಿವೆ. ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ. ಸಮೂಹದ ಶಕ್ತಿ, ಸಮಾಜೋ ಧಾರ್ಮಿಕಾಭಿವೃದ್ಧಿಗೆ ಅವರು ಸದಾ ಚಿಂತನಶೀಲರಾಗಿದ್ದರು. “ಬರೆದಂತೆಯೇ ಬದುಕು – ಬದುಕಿದಂತೆಯೆ ಬರಹ" ಎಂಬ ಅವರ ಧೋರಣೆ ಸಾರ್ವಕಾಲಿಕ ನಾಯಕತ್ವದ ಗುಣಕ್ಕೆ ಸಾಕ್ಷಿ ಎಂಬುದನ್ನು ಚಿನ್ನಸ್ವಾಮಿಯವರು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ. “ಮಾನವ ಕುಲಂ ತಾನೊಂದೇ ವಲಂ” ಎಂಬ ಪಂಪನ ವಾಣಿಯನ್ನು ಮರು ರಚನೆಗೈದ ಅಂಬೇಡ್ಕರರಲ್ಲಿಯ ಸಾಮಾಜಿಕ ಪ್ರಜ್ಞೆ ಬೌದ್ಧಿಕ ಚಿಂತನೆಗಳು ಹೇಗಿದ್ದವು ಎಂಬುದನ್ನು ಚಿನ್ನಸ್ವಾಮಿ ಅವರು ಎಳೆಎಳೆಯಾಗಿ ಇಲ್ಲಿ ಚಿತ್ರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಚಿನ್ನಸ್ವಾಮಿ ಡಿ

ಲೇಖಕ ಚಿನ್ನಸ್ವಾಮಿ ಡಿ. ಡಿ. ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದವರು. ತಾಯಿ ಗುರುಸಿದ್ದಮ್ಮ, ತಂದೆ ದೊಡ್ಡಸಿದ್ದಯ್ಯ. ಪ್ರಾಥಮಿಕ ಶಿಕ್ಷಣವನ್ನು ಬ್ಯಾಡಮೂಡ್ಲು, ಹಾಗೂ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರದನಹಳ್ಳಿಯಲ್ಲಿ,  ಪಿ.ಯು.ಸಿ. ಮತ್ತು ಪದವಿಯನ್ನು ಚಾಮರಾಜನಗರದಲ್ಲಿ, ಸ್ನಾತಕೋತ್ತರ ಹಾಗೂ ಎಂ.ಫಿಲ್. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಬಿ.ಇಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ,, ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನಲ್ಲಿ, ತೆಲುಗು ಭಾಷೆ ಡಿಪ್ಲೋಮಾವನ್ನು ಪೂರೈಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ನಾಟಕಗಳಲ್ಲಿ ಬುದ್ಧ ಬಸವ ಅಂಬೇಡ್ಕರ್” ವಿಷಯವಾಗಿ ಸಂಶೋಧನಾ ವಿದ್ಯಾರ್ಥಿ. ಅವರ ಮೊದಲ ವಿಮರ್ಶೆ ಕೃತಿಯಾದ ‘ನೆಲದೊಡಲು'ನ್ನು ಹೊರತಂದಿದ್ದಾರೆ ಮಹಿಳಾ ಸಬಲೀಕರಣದಲ್ಲಿ ಅಂಬೇಡ್ಕರ್, ...

READ MORE

Related Books