ಮಠದ ಗೂಳಿಗಳು

Author : ವಿಶ್ವಾರಾಧ್ಯ ಸತ್ಯಂಪೇಟೆ

Pages 200

₹ 150.00




Year of Publication: 2019
Published by: ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ
Address: ಬಸವ ಬೆಳಗು, ಬುದ್ಧ ವಿಹಾರದ ಹತ್ತಿರ, ಶಹಾಪುರ, ಯಾದಗಿರಿ - 585223

Synopsys

‘ಮಠದ ಗೂಳಿಗಳು’ ಲೇಖಕ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಕೃತಿ. ಲಿಂಗಾಯತ ಧರ್ಮದ ಹೋರಾಟದಿಂದ ಪ್ರೇರೇಪಿತರಾಗಿ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಫೇಸ್ ಬುಕ್ ನಲ್ಲಿ ಬರೆದ ಲೇಖನಗಳ ಸಂಕಲನ ಈ ಕೃತಿ. ಪುರೋಹಿತರಿಗೆ ಮಾರಿಕೊಂಡವರು, ಅಯ್ಯಪ್ಪ ಸ್ವಾಮಿ ಗಲಾಟೆ ನೀಗಿಸುವ ಶಕ್ತಿ ವಚನ ಸಾಹಿತ್ಯಕ್ಕಿದೆ, ನಮ್ಮ ಉಸಾಬರಿ ನಿಮಗೇಕೆ ಪೇಜಾವರರೇ, ಮಾತೆ ಮಹಾದೇವಿ ಅವರ ಕರ್ತೃತ್ವ ಶಕ್ತಿ, ಅರಿಯದವರೊಡನೆ ಕಿಡಿಯ ತೆಗೆದುಕೊಳ್ಳಲಿಲ್ಲ, ಪುರೋಹಿತರ ಕಿತಾಪತಿಗಳು, ಬಸವ ಎಂಬ ಹೊನ್ನ ನೇಗಿಲ ಬಳಸಿ ಎಕ್ಕೆಯ ಬೀಜ ಬಿತ್ತುವರೆ, ಪಂಚಾಚಾರ್ಯರ ಆವಾಂತರಗಳು, ಲಿಂಗಾಯತರಲ್ಲಿ ವೇದಮೂರ್ತಿ, ಶಾಸ್ತ್ರಿ ಪಂಡಿತರಿಲ್ಲ, ಲಿಂಗ ಜಂಗಮ ಪ್ರಸಾದಗಳು ಹೇಗೆ ಹುಟ್ಟಿದವು ಗೊತ್ತೆ, ನಾನು ಜಂಗಮ ವಿರೋಧಿ ಅಲ್ಲ, ಲಿಂಗಾಯತ ಸ್ವತಂತ್ರ ಧರ್ಮ, ಮುಂದೇನು, ಬಸವ ಎಂಬ ಮೂರಕ್ಷರಗಳಲ್ಲಿ ಮಂತ್ರ ಶಕ್ತಿ ಇದೆ, ನಡೆದಾಡುವ ದೇವರು ಯಾರು, ದೇವಸ್ಥಾನಗಳನ್ನು ಇಂದಿಗೂ ಪ್ರೀತಿಸುತ್ತೇನೆ, ಲಿಂಗಾಯತ ಧರ್ಮದಲ್ಲಿ ಅಯ್ಯಾಚಾರಗಳಿಲ್ಲ. ಅಲ್ಲಮಪ್ರಭು ಪರಂಪರೆಗೆ ತಿಲಾಂಜಲಿ ಸೇರಿದಂತೆ ಒಟ್ಟು 69 ಲೇಖನಗಳಿವೆ.

About the Author

ವಿಶ್ವಾರಾಧ್ಯ ಸತ್ಯಂಪೇಟೆ
(08 June 1969)

ವಿಶ್ವಾರಾಧ್ಯ ಸತ್ಯಂಪೇಟೆ ಮೂಲತಃ ಯಾದಗಿರಿ ಜಿಲ್ಲೆಯ (08-06-1969) ಸುರಪುರ ತಾಲೂಕಿನ ಸತ್ಯಂಪೇಟೆಯವರು. ತಂದೆ ಹಿರಿಯ ಲೇಖಕ, ಚಿಂತಕ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ, ತಾಯಿ- ಶಾಂತಮ್ಮ ಸತ್ಯಂಪೇಟೆ. ಬಿ.ಎ ಮುಗಿಸಿ, ಡಿಪ್ಲೋಮಾ ಇನ್ ಜರ್ನಲಿಸಂ ಪೂರ್ಣಗೊಳಿಸಿದ್ದಾರೆ.  ಹವ್ಯಾಸಿ ಪತ್ರಕರ್ತರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಹಾಗೂ ಸತ್ಯಂಪೇಟೆಯ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ. ಈ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಬಸವ ಬೆಳಕು ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ‘ಮನೆಯಲ್ಲಿ ಮಹಾಮನೆ’ ಶೀರ್ಷಿಕೆಯಡಿ ಬಸವ ತತ್ವ ಪ್ರಚಾರ-ಪ್ರಸಾರವೇ ಜೀವಾಳವಾಗಿರಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.  ಕೃತಿಗಳು:  ಸಾಹಿತ್ಯ ಕೃಷಿಯೂ ಅವರ ಇಷ್ಟದ ಹವ್ಯಾಸ. ಚಿತ್ತ ಚೋರರು, ಬಸವಣ್ಣ ಮತ್ತು ...

READ MORE

Related Books