ನಾಗರಿಕತೆ ಮತ್ತು ಅರಾಜಕತೆ

Author : ಜಿ.ಕೆ. ಗೋವಿಂದರಾವ್

Pages 298

₹ 160.00




Year of Publication: 2001
Published by: ಇಳಾ ಪ್ರಕಾಶನ
Address: ರಾಘವ ನಗರ, ನ್ಯೂ ಟಿಂಬರ್‌ಯಾರ್‍ಡ್‌ ಲೇಔಟ್, ಬೆಂಗಳೂರು. 560026

Synopsys

`ನಾಗರಿಕತೆ ಮತ್ತು ಅರಾಜಕತೆ’ ಜಿ. ಕೆ. ಗೋವಿಂದರಾವ್‌ ಅವರ ಬರಹಗಳಾಗಿವೆ. ಇತಿಹಾಸದ ಅನೇಕ ಉದಾಹರಣೆಗಳಿಂದ ನಮ್ಮನ್ನು ಬೆಚ್ಚಿಬೀಳಿಸುತ್ತ. ಜಗತ್ತಿನ ಶ್ರೇಷ್ಠ ಚಿಂತಕರನ್ನು ಪರಿಚಯಿಸುತ್ತ ನಮ್ಮ ಹೊಣೆಗೇಡಿತನವನ್ನು ಬೊಟ್ಟು ಮಾಡಿ ತೋರಿಸುವ ಅವರು ವರ್ತಮಾನವನ್ನು ಉದಾಹರಿಸುವ ರೀತಿ ಅನನ್ಯ.

About the Author

ಜಿ.ಕೆ. ಗೋವಿಂದರಾವ್
(27 April 1937 - 15 October 2021)

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...

READ MORE

Reviews

ಹೊಸತು- ಆಗಸ್ಟ್‌-2002

ಕೋಮುವಾದ ಹಾಗೂ ಜಾಗತೀಕರಣದ ಹುಚ್ಚು ಪ್ರವಾಹದಲ್ಲಿ ಜಗತ್ತೇ ಕೊಚ್ಚಿಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಅಪಾಯವನ್ನರಿತು ಒಂದಷ್ಟು ತಡೆಗೋಡೆ ಒಡ್ಡುವತ್ತ ತಮ್ಮ ಕಾಳಜಿ-ಕರ್ತವ್ಯ ನಿರ್ವಹಿಸುತ್ತಿರುವ ಅಪರೂಪದ ಲೇಖಕ ಜಿ. ಕೆ. ಗೋವಿಂದರಾವ್ ಅಭಿನಂದನಾರ್ಹರು. ಇತಿಹಾಸದ ಅನೇಕ ಉದಾಹರಣೆಗಳಿಂದ ನಮ್ಮನ್ನು ಬೆಚ್ಚಿಬೀಳಿಸುತ್ತ, ಜಗತ್ತಿನ ಶ್ರೇಷ್ಠ ಚಿಂತಕರನ್ನು ಪರಿಚಯಿಸುತ್ತ ನಮ್ಮ ಹೊಣೆಗೇಡಿತನವನ್ನು ಬೊಟ್ಟು ಮಾಡಿ ತೋರಿಸುವ ಅವರು ವರ್ತಮಾನವನ್ನು ಉದಾಹರಿಸುವ ರೀತಿ ಅನನ್ಯ .

Related Books