ಸಾಮಾಜಿಕ ಬದಲಾವಣೆ

Author : ವಿ. ಮುನಿವೆಂಕಟಪ್ಪ

Pages 280

₹ 300.00




Year of Publication: 2012
Published by: ಭಿಮ ಪ್ರಕಾಶನ
Address: # 1240, 3ನೇ ಅಡ್ಡರಸ್ತೆ, ಗಂಗೆ ರಸ್ತೆ, ಕುವೆಂಪು ನಗರ, ಮೈಸೂರು-570023
Phone: 9448746650

Synopsys

ಲೇಖಕ, ಚಿಂತಕ ಡಾ. ವಿ.ಮುನಿವೆಂಕಟಪ್ಪ ಅವರ ಸಂಪಾದಿತ ಕೃತಿ-ಸಾಮಾಜಿಕ ಬದಲಾವಣೆ. ಸುಮಾರು 1970 ರಲ್ಲಿ ಕರ್ನಾಟಕದಲ್ಲಿ ಆರಂಭವಾದ ದಲಿತ ಚಳವಳಿಯು ಜನಸಾಮಾನ್ಯರಲ್ಲಿ ದಲಿತ ಜಾಗೃತಿ ಮೂಡಿಸಿತು ಮಾತರ್‍ರವಲ್ಲ; ಶತಶತಮಾನಗಳ ಶೋಷಣೆಯನ್ನು ನಿರ್ಮೂಲನೆಗೊಳಿಸುವ ಭರವಸೆ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ವ್ಯವಸ್ಥೆಯನ್ನು ಪ್ರಶ್ನಿಸಲಾಯಿತು. ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಅಸ್ತ್ರ ಝಳಪಿಸಲಾಯಿತು. ಈ ಹಿನ್ನೆಲೆಯಲ್ಲಿ ಹೆಣೆದ ವಿಚಾರಗಳ ವಿಶ್ಲೇಷಣೆ ಈ ಕೃತಿ  ಒಳಗೊಂಡಿದೆ. ಚಳವಳಿಗಳು ಹೋರಾಟ ಕೇಂದ್ರಿತವಾಗಿರಬೇಕು ಎಂಬುದಕ್ಕೆ ಲೇಖಕರ ಬದ್ಧತೆಯೂ ಇಲ್ಲಿಯ ಬರೆಹಗಳಲ್ಲಿ ಕಾಣಬಹುದು. ಡಾ. ಆರ್. ಇಂದಿರಾ ಅವರು ಬರೆದ ಮುನ್ನುಡಿಯಲ್ಲಿ ‘ಹೊಂದಾಣಿಕೆಯೊಂದಿಗೆ ಹೋರಾಟ ನಡೆಸುವವರೇ ಹೆಚ್ಚಿರುವ ಇಂದಿನ ದಿನಮಾನದಲ್ಲಿ ಸೈದ್ಧಾಂತಿಕ ಬದ್ಧತೆ ಇಟ್ಟುಕೊಂಡಿರುವ ಲೇಖಕರ ಬರೆಹಗಳು ಪ್ರಶಂಸಾರ್ಹ’ ಎಂದು ಶ್ಲಾಘಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books