ಅನುರಣನ

Author : ಮಂಜುನಾಥ ಉಲವತ್ತಿ ಶೆಟ್ಟರ್

Pages 236

₹ 180.00




Year of Publication: 2017
Published by: ನಿರಂತರ ಪ್ರಕಾಶನ
Address: #165, 8ನೇ A ಅಡ್ಡರಸ್ತೆ, 14ನೇ A ಮುಖ್ಯರಸ್ತೆ, ನೆಲಮಹಡಿ, ಆರ್ ಪಿಸಿ ಬಡಾವಣೆ, ವಿಜಯನಗರ, ಬೆಂಗಳೂರು-560104
Phone: 98868 30331

Synopsys

ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಅವರ ಲೇಖನಗಳ ಸಂಗ್ರಹ ಕೃತಿ-ಅನುರಣನ. ಸಾಮಾಜಿಕ, ಆರ್ಥಿಕ ಸಮಸ್ಯೆಗಳೊಂದಿಗೆ ವೃತ್ತಿ ಶಿಕ್ಷಣದ ಸಾಧ್ಯತೆಗಳ ಕುರಿತು ಬರೆದವುಗಳು. (ಸಾಮಾಜಿಕ, ಆರ್ಥಿಕ ಸಮಸ್ಯೆ. ವ್ಯಕ್ತಿಚಿತ್ರಣ ಕುರಿತ ಆಯ್ದ ಬರಹಗಳು) ಈ ಪುಸ್ತಕದಲ್ಲಿನ 40 ಲೇಖನಗಳನ್ನು 'ಬದಲಾವಣೆ', 'ವ್ಯಕ್ತಿಚಿತ್ರಣ' ಮತ್ತು 'ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳು' ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿ ವಿಶ್ಲೇಷಿಸಲಾಗಿದೆ. ವಿವಿಧ ಲೇಖನಗಳ ಮೂಲಕ ವಾಸ್ತವದ ನೆಲೆಯಲ್ಲಿ ತಮ್ಮ ಕಾಲದ ಆಗುಹೋಗುಗಳನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಈ ಲೇಖನಗಳಲ್ಲಿ ಎದ್ದು ಕಾಣುತ್ತಿದೆ. ಜಾತಿಗಳು, ಅಸಹಿಷ್ಣುತೆ, ಮದ್ಯಪಾನ, ಸರ್ವಾಧಿಕಾರ, ಅತ್ಯಾಚಾರ, ಭಯೋತ್ಪಾದನೆ, ಮೌಢ್ಯಾಚರಣೆ, ಸ್ಮಾರಕಗಳ ರಕ್ಷಣೆ, ಅಸಮಾನತೆ ಮುಂತಾದವು ಅವರಿಗೆ ಕಾಡುವ ಪ್ರಮುಖ ಸಮಸ್ಯೆಗಳಾಗಿವೆ.

ಬಸವೇಶ್ವರ, ಕನಕದಾಸರು, ವಿವೇಕಾನಂದ, ಅಂಬೇಡ್ಕರ್, ಶಿವರಾಮ ಕಾರಂತ, ಎಪಿಜೆ ಅಬ್ದುಲ್ ಕಲಾಂ, ಕುವೆಂಪು, ಗಾಂಧೀಜಿ, ನಾರಾಯಣ ಗುರು, ಲಾಲಬಹಾದ್ದೂರ ಶಾಸ್ತ್ರಿ ಅಂಥ ಧೀಮಂತರು ಅವರಿಗೆ ಆದರ್ಶ ಮೂರ್ತಿಗಳಾಗಿದ್ದಾರೆ. ಇವೆಲ್ಲವುಗಳ ಮಧ್ಯೆ ಸಾಮರಸ್ಯದ ಭಾರತೀಯ ಪರಂಪರೆ ಅವರಿಗೆ ಆಶಾದಾಯಕವಾಗಿ ಚಿಂತಿಸಲು ಸಹಕರಿಸುತ್ತಿದೆ. ಅವರ ಚಿಂತನೆಗಳು ಎಡ ಬಲ ಸಿದ್ಧಾಂತಗಳಿಂದ ಕೂಡಿರದೆ ಉದಾರವಾದಿ ನೀತಿಯನ್ನು ಎತ್ತಿ ಹಿಡಿಯುವಂಥವುಗಳಾಗಿವೆ. ಅವರ ವಿಮರ್ಶಾತ್ಮಕ ನಿಲವು ನಿಷ್ಪಕ್ಷಪಾತದಿಂದ ಕೂಡಿದುದಾಗಿದೆ. 
ಮೌಢ್ಯಾಚರಣಗೆ ಮುಖ್ಯವಾಗಿ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಾರೆ. ಲಿಂಗತಾರತಮ್ಯಕ್ಕೂ ಅತ್ಯಾಚಾರಕ್ಕೂ ಸಂಬಂಧವಿದೆ. ಇದೊಂದು ರೀತಿಯ ಭಯೋತ್ಪಾದನೆಯೆ ಆಗಿದೆ ಎಂದು ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ. 
ಹೆಣ್ಣನ್ನು ಮನುಷ್ಯರಂತೆ ಕಾಣಲು ಸಿದ್ಧರಿಲ್ಲದ ನಾವು 'ಅವಳನ್ನು ದೇವತೆಯಂತೆ ಕಾಣುತ್ತೇವೆ' ಎಂದು ಸುಳ್ಳು ಹೇಳುತ್ತೇವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಭ್ರಮೆಯಲ್ಲಿಟ್ಟು ಶೋಷಣೆ ಮಾಡುವ ಕ್ರಮವಿದು ಎಂಬ ವಿಚಾರವು ಲೇಖನದ ಜೀವಾಳವಾಗಿದೆ.

About the Author

ಮಂಜುನಾಥ ಉಲವತ್ತಿ ಶೆಟ್ಟರ್

ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿಯವರು. ತಂದೆ ರೇವಣಸಿದ್ದಪ್ಪ, ತಾಯಿ ನಾಗಮ್ಮ. ಲೇಖಕರು ಎಂ.ಎ, ಎಂ,ಫಿಲ್ ಪದವೀಧರರು. ಬಳ್ಳಾರಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಆರ್ಥಿಕ, ಪ್ರಚಲಿತ, ವೈಚಾರಿಕ, ವೈಜ್ಞಾನಿಕ, ಸಾಮಾಜಿಕ, ಐತಿಹಾಸಿಕ ಮತ್ತು  ಸಾಂಸ್ಕೃತಿಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಹಪ್ರಾಧ್ಯಾಪಕರು. ಪ್ರಸ್ತುತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರಗತಿಪರ ಚಿಂತಕರ ಒಕ್ಕೂಟದಲ್ಲಿದ್ದು, ಸೆಮಿನಾರ್, ವಿಶೇಷ ಉಪನ್ಯಾಸಗಳನ್ನು ನೀಡಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ...

READ MORE

Related Books