ದಲಿತ ಚಳವಳಿ: ಒಂದು ಅವಲೋಕನ

Author : ವಿ. ಮುನಿವೆಂಕಟಪ್ಪ

Pages 320

₹ 190.00




Year of Publication: 2013
Published by: ವಾಚಸ್ಪತಿ ಪ್ರಕಾಶನ
Address: # 658, 2ನೇ ಮಹಡಿ, 4ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, E & F ಬ್ಲಾಕ್, 2ನೇ ಹಂತ, ರಾಮಕೃಷ್ಣನಗರ, ಮೈಸೂರು.

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ: ಒಂದು ಅವಲೋಕನ. 1970 ರಲ್ಲಿ ಕರ್ನಾಟಕದಲ್ಲಿ ದಲಿತ ಚಳವಳಿ ಆರಂಭವಾಯಿತು. ನಂತರ ದಲಿತ ಸಂಘಟನೆ ಹೆಸರಲ್ಲಿ ಇತರೆ ಸಂಘಟನೆಗಳ ಸ್ಥಾಪಿತವಾದವು. ಚಳವಳಿಗೆ ಸೂಕ್ತ ಚಾಲನೆ ನೀಡಿದ್ದವು. ಆದರೆ, ಕ್ರಮೇಣ ಸೂಕ್ತ ನಾಯಕತ್ವದ ಅಭಾವ ತಲೆದೋರಿ ಚಳವಳಿಯ ಕಾವು ತಣ್ಣಗಾಗುತ್ತಾ ಬಂತು. ಈ ಬಗ್ಗೆ ವಿವಿಧ ಲೇಖಕರಿಂದ ತರಿಸಿಕೊಂಡ ಲೇಖನಗಳ ಸಂಗ್ರಹ ಈ ಕೃತಿ ಒಳಗೊಂಡಿದೆ. ಐತಿಹಾಸಿಕ ಚಳವಳಿಯೊಂದರ ಏಳು-ಬೀಳುಗಳನ್ನು ವಿವಿಧ ಆಯಾಮದಿಂದ ನೋಡಿ ಬರೆದ ಬೇರೆ ಬೇರೆ ಲೇಖನಗಳು ಇಲ್ಲಿರುವ ಪ್ರಯುಕ್ತ, ಸಂಶೋಧನೆಯ ಅಧ್ಯಯನಕ್ಕೂ ಈ ಗ್ರಂಥ ಉತ್ತಮ ಆಕರವಾಗಿದೆ. ಹಿರಿಯ ಸಾಹಿತಿ ದೇಜಗೌ ಅವರು ಸುದೀರ್ಘ ಮುನ್ನುಡಿ ಬರೆದಿದ್ದು, ಸಂಪಾದಕ ವಿ. ಮುನಿ ವೆಂಕಟಪ್ಪ ಅವರ ಶ್ರಮ ಹಾಗೂ ಕಳಕಳಿಯನ್ನು ಶ್ಲಾಘಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books