ಮಾರ್ಗದ ಮಹಾವಾಕ್ಯಗಳು

Author : ಎಫ್.ಟಿ.ಹಳ್ಳಿಕೇರಿ

Pages 228

₹ 200.00




Year of Publication: 2012
Published by: ವಿಕಾಸ ಪ್ರಕಾಶನ
Address: ಶೋಧನ, ಶಿಕ್ಷಕರ ಬಡಾವಣೆ, ಎಂ.ಪಿ. ಪ್ರಕಾಶ ನಗರ, ಹೊಸಪೇಟೆ-583201

Synopsys

ಡಾ. ಎಫ್‌. ಟಿ. ಹಳ್ಳಿಕೇರಿ ಮತ್ತು ಎನ್.ಬಿ. ವಿರುಪಾಕ್ಷಿ ಅವರು 2012ರಲ್ಲಿ ಕಲಬುರ್ಗಿ ಅವರ ಕುರಿತು ’ಮಾರ್ಗದ ಮಹಾವಾಕ್ಯಗಳು’ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದರು. ’ಹಾದಿಯ ಹೆಜ್ಜೆಗಳು’ ಕೃತಿಯಲ್ಲಿದ್ದ ಲೇಖನಗಳ ಜೊತೆಗೆ ಇನ್ನೂ 13 ಹೊಸ ವಿಚಾರಗಳನ್ನು ಅವರು ಇಲ್ಲಿ ಪ್ರಕಟಿಸಿದ್ದಾರೆ.

ಕನ್ನಡ ಸಂಶೋಧನ ಕ್ಷೇತ್ರದ ಬಹುದೊಡ್ಡ ಹೆಸರು  ಎಂ.ಎಂ.ಕಲಬುರ್ಗಿ. ಕನ್ನಡ ಭಾಷೆ, ಸಾಹಿತ್ಯ, ಶಾಸನ, ಹಸ್ತಪ್ರತಿ, ಗ್ರಂಥಸಂಪಾದನೆ, ಚರಿತ್ರೆ, ಧರ್ಮ, ಜನಪದ ಹೀಗೆ ಹತ್ತುಹಲವು ವಿಷಯಗಳ ಕುರಿತು ಕೈಕೊಂಡ ಸಂಶೋಧನೆ ವೈವಿಧ್ಯಮಯ. ವಿಶೇಷವಾಗಿ ವಚನ ಸಾಹಿತ್ಯ, ಲಿಂಗಾಯತ ಸಂಸ್ಕೃತಿ, ಸ್ಥಳೀಯ ಚರಿತ್ರೆ ಹಾಗೂ ಕುರುಬ ಸಮಾಜದ ಬಗೆಗಿನ ಅವರ ಶೋಧಗಳು ಸಂಶೋಧನ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಹೀಗಾಗಿ ಸಂಶೋಧನೆಯ ಹಾದಿಯಲ್ಲಿ ಅನೇಕ ಅಗ್ನಿಕುಂಡಗಳನ್ನು ತುಳಿಯುತ್ತ ಕಣ್ಣಮುಂದಿನ ಬೆಳಕಿಗಾಗಿ ಹಂಬಲಿಸುತ್ತ ಮಹಾಮಾರ್ಗ ನಿರ್ಮಿಸಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಡಾ. ಕಲಬುರ್ಗಿ ಅವರು ನಿರಂತರವಾಗಿ ಕೈಕೊಂಡ ಸಂಶೋಧನೆಯ ಫಲವಾಗಿ ನೂರಕ್ಕೂ ಹೆಚ್ಚು ಕೃತಿಗಳು ಹಾಗೂ ಐದನೂರಕ್ಕೂ ಹೆಚ್ಚು ಸಂಶೋಧನ ಸಂಪ್ರಬಂಧಗಳು ಪ್ರಕಟವಾಗಿವೆ. ಮಾರ್ಗ ಹೆಸರಿನ ಆರು ಸಂಪುಟಗಳು ಅವರ ಸಂಶೋಧನೆಯ ಸಾಧನೆ ಮತ್ತು ವ್ಯಾಪಿಗೆ ಹಿಡಿದ ಕನ್ನಡಿಯಂತಿವೆ. ಈ ಎಲ್ಲಾ ಕೃತಿ ಹಾಗೂ ಸಂಪ್ರಬಂಧಗಳಲ್ಲಿನ ಚಿಂತನನಿಷ್ಟ ವ್ಯಾಖ್ಯೆಗಳನ್ನು ಹೊರತೆಗೆದು ವಿಷಯಾನುಸಾರ ವರ್ಗೀಕರಿಸಿ, “ಮಾರ್ಗದ ಮಹಾವಾಕ್ಯಗಳು” ಎಂಬ ಈ ಕೃತಿಯಲ್ಲಿ ಕ್ರಮಬದ್ದವಾಗಿ ಅಳವಡಿಸಲಾಗಿದೆ. - ಡಾ.ಎಫ್.ಟಿ.ಹಳ್ಳಿಕೇರಿ ಹಾಗೂ ಎನ್. ವಿರೂಪಾಕ್ಷಿ ಅವರು ಈ ಸಂಪುಟವನ್ನು ವ್ಯವಸ್ಥಿತವಾಗಿ ಸಂಯೋಜಿಸಿದ್ದಾರೆ. ಸಂಶೋಧನೆ, ಹಸ್ತಪ್ರತಿ-ಗ್ರಂಥಸಂಪಾದನೆ, ಶಾಸನ-ಪುರಾತತ್ಯ, ಪ್ರಾಚೀನ ಸಾಹಿತ್ಯ, ನಾಮವಿಜ್ಞಾನ, ಚರಿತ್ರೆ, ಸಮಾಜ-ಪರಿಸರ ಹೀಗೆ ಇಪ್ಪತ್ತಾರು ಭಾಗಗಳಲ್ಲಿ ವಿಚಾರಪೂರ್ಣವಾದ ಮಹಾವಾಕ್ಯಗಳು ಇಲ್ಲಿ ಅಡಕಗೊಂಡಿವೆ. ಇಲ್ಲಿನ ಪ್ರತಿಯೊಂದು ಮಹಾವಾಕ್ಯಕ್ಕೂ ತನ್ನದೇ ಆದ ಅನನ್ಯತೆಯಿದೆ;ಅಸ್ತಿತ್ವವಿದೆ. ಹೀಗಾಗಿ ಸಂಶೋಧಕರಿಗೆ ವಿದ್ಯಾರ್ಥಿಗಳಿಗೆ ಈ ಸಂಪುಟವು ಸಹಾಯಕಾರಿಯಾಗುತ್ತದೆ.

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books