ಅಂಬೇಡ್ಕರ್ ಭಾರತೀಯ ಬೆಳಕು

Author : ವಿ. ಮುನಿವೆಂಕಟಪ್ಪ

Pages 284

₹ 170.00




Year of Publication: 2011
Published by: ಪಂಚಶೀಲ ಪ್ರಕಾಶನ
Address: # 285, ಮಧುವನ, 10ನೇ ಅಡ್ಡರಸ್ತೆ, ಶ್ರೀರಾಮಪುರ, 2ನೇ ಹಂತ, ಮೈಸೂರು-570023

Synopsys

ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಅಂಬೇಡ್ಕರ್ ಭಾರತೀಯ ಬೆಳಕು. ದಲಿತರ ಚಿಂತನೆಗಳನ್ನು ಕೇಂದ್ರೀಕರಿಸಿ ವಿಶ್ಲೇಷಿಸಿದ ಕೃತಿ ಇದು. ಏಕೆಂದರೆ, ಅಂಬೇಡ್ಕರ್ ಅವರ ಚಿಂತನೆಗಳನ್ನು ಕೇವಲ ದಲಿತರಿಗೆ ಸೇರಿದ್ದು ಎಂಬ ಸಂಕುಚಿತ ಭಾವನೆಗಳಡಿ ಇಂದು ದಲಿತರು ವರ್ತಿಸುತ್ತಿದ್ದಾರೆ. ಇದು ಬದಲಾಗಬೇಕು. ಡಾ. ಅಂಬೇಡ್ಕರ್ ಇಡೀ ಭಾರತೀಯ ಬೆಳಕು. ಅವರು ಯಾವುದೇ ಧರ್ಮಕ್ಕೆ, ಜಾತಿಗೆ ಸೀಮಿತಗೊಂಡವರಲ್ಲ. ಸಮಾನತೆಯ ನವ ಸಮಾಜ ನಿರ್ಮಾಣಕ್ಕೆ ಆಶಿಸಿದವರು. ಮಾನವೀಯ ಮೌಲ್ಯಗಳನ್ನು ದಲಿತರು ಅರ್ಥೈಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಬದುಕನ್ನು ಹುರಿಗೊಳಿಸಿಕೊಳ್ಳಬೇಕು ಎಂಬುದು ಡಾ. ಅಂಬೇಡ್ಕರ್ ಅವರ ಆಶಯವೂ ಆಗಿತ್ತು. ಆದ್ದರಿಂದ, ಲೇಖಕರು ಅಂಬೇಡ್ಕರ್ ಅವರನ್ನು ಭಾರತೀಯ ಬೆಳಕು ಎಂದು ಹೇಳುವ ಮೂಲಕ ದಲಿತರ ಅಭಿವೃದ್ಧಿಗಾಗಿ ಅವರ ಚಿಂತನೆಗಳ ಅನುಸರಣೆ ಅನಿವಾರ್ಯ ಎಂದು ಇಲ್ಲಿಯ ಲೇಖನಗಳಲ್ಲಿ ಪ್ರತಿಪಾದಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books