ಕವಿ ಕಾವ್ಯ ದರ್ಪಣ

Author : ಶರಣಬಸಪ್ಪ ವಡ್ಡನಕೇರಿ

Pages 168

₹ 80.00




Year of Publication: 2013
Published by: ಶರಣ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಶರಣಬಸಪ್ಪ ವಡ್ಡನಕೇರಿ ಅವರ ಕೃತಿ-ಕವಿ ಕಾವ್ಯ ದರ್ಪಣ. ಕನ್ನಡಕ್ಕೆ . ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ವಾಹಿನಿಯ ಅನೇಕ ಬಗೆಯ ಏಳುಬೀಳುಗಳನ್ನು ಹಲವಾರು ಬಗೆಯ ಪ್ರಯೋಗಗಳನ್ನು ಕಂಡಿದೆ. ಹಲ್ಮಿಡಿ ಶಾಸನದ ಬೆಳಕಿನೊಂದಿಗೆ ಹೊರಜಗತ್ತಿಗೆ ಪರಿಚಯವಾದ ಕನ್ನಡವು ನಂತರ ಅನೇಕ ಮಜಲುಗಳನ್ನು ಕಂಡಿತು. ಪ್ರಥಮ ಕನ್ನಡ ಗ್ರಂಥವೆಂದು ಹೇಳಲಾದ ಕವಿರಾಜಮಾರ್ಗವು ರಾಷ್ಟ್ರಕೂಟರ ಕಾಲಘಟ್ಟದಲ್ಲಿ ಲಭ್ಯವಾದ ಗ್ರಂಥವಾಗಿದೆ.ಇದನ್ನು ರಾಷ್ಟ್ರಕೂಟರ ಆಸ್ಥಾನ ಕವಿ ಶ್ರೀವಿಜಯ ನಿಂದ ರಚಿತವಾದದೆಂದು ತಿಳಿಯಲಾಗಿದೆ. ಹೀಗೆ ಶ್ರೀವಿಜಯ ನಿಂದ ಪ್ರಾರಂಭವಾದ ಕನ್ನಡ ಸಾಹಿತ್ಯ ಕೃಷಿಯೂ ಇಂದಿನ ಆಧುನಿಕ ಸಾಹಿತ್ಯದ ಬೆಳವಣಿಗೆಯ ವರೆಗೂ ಒತೋಪ್ರೊತವಾಗಿ ಹರಿದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ.ಭಾರತದ ಬೇರಾವುದೇ ಭಾಷೆಯಲ್ಲಿ ಗಳಿಸಲಾರದಷ್ಟು ಅಷ್ಟು ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡದ ಸಾಹಿತಿಗಳು ಗಳಿಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಇಂತಹ ಧೀಮಂತ ಲೇಖಕರ, ಸಾಹಿತಿಗಳ, ಕವಿಗಳ,ಕಾದಂಬರಿಕಾರರ, ಪರಿಚಯ ಇಂದಿನ ಯುವ ಜನಾಂಗಕ್ಕೆ ಅವಶ್ಯವಾಗಿರುವ ಸಂಗತಿ.ಆದ್ದರಿಂದ ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೆ ಸಾಹಿತಿಗಳ ಪರಿಚಯವನ್ನು ಸಂಕ್ಷಿಪ್ತ ರೂಪದಲ್ಲಿ ನೀಡಿದ್ದೇ ಈ ಕೃತಿ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books