ತಾಯಿ ಕಾದಿಹಳು

Author : ಹೂ.ವೆ. ಶೇಷಾದ್ರಿ

Pages 60

₹ 8.00




Year of Publication: 1969
Published by: ರಾಷ್ಟ್ರೋತ್ತಾನ ಸಾಹಿತ್ಯ
Address: ಬೆಂಗಳೂರು-19.

Synopsys

'ತಾಯಿ ಕಾದಿಹಳು' ಮೌಲಿಕ ವೈಚಾರಿಕ ಬರಹ ಒಳಗೊಂಡಿರುವ ಕೃತಿಯನ್ನು ಲೇಖಕ ಹೂ.ವೆ. ಶೇಷಾದ್ರಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ನಮ್ಮ ಜೀವನವನ್ನು ಸುತ್ತುವರಿದು ಕಾಡುವ ರಾಷ್ಟ್ರಕೇಂದ್ರಿತ ಸಮಸ್ಯೆಗಳ ಚಿಂತನ, ಸಾಮಾಜಿಕ, ಆರ್ಥಿಕ, ನೈತಿಕ, ಪಾರಮಾರ್ಥಿಕ ಹಾಗೂ ಜನಜೀವನದ ನಾನಾ ಮುಖಗಳ ದರ್ಶನ, ಸಮಾಜದ ಸುಖ ದುಃಖಗಳಿಗಾಗಿ ಶ್ರೇಷ್ಠ ಸಮಾಜ ಸಂಘಟಕರ ಹೃದಯವೊಂದು ಮಿಡಿದ ಬಗೆ ಮತ್ತು ಪ್ರಜ್ಞಾವಂತ ವ್ಯಾಪಕ ದೃಷ್ಟಿಯೊಂದು ಸಮ್ಮಿಳಿತಗೊಂಡ ಫಲವಾಗಿ ಈ ಪುಸ್ತಕ ಅರಳಿದೆ. ಸಮಾಜದಲ್ಲಿರುವ ಸಮಸ್ಯೆಗಳನ್ನು ಕಂಡು ರಾಷ್ಟ್ರಪ್ರೇಮಿಯೊಬ್ಬನ ಮನಸಲ್ಲಾಗುವ ಏರಿಳಿತಗಳನ್ನು ಕೇಂದ್ರಿಕರಿಸಿಕೊಂಡು ಈ ಕೃತಿಯು ರಚಿತವಾಗಿದೆ.

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Related Books