ಮಾತಿಗೆ ಮುನ್ನ

Author : ಲಕ್ಷ್ಮೀಶ ತೋಳ್ಪಾಡಿ

Pages 104

₹ 100.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ತನ್ನದೇ ನುಡಿಗಟ್ಟು ಪಡೆಯಬೇಕೆನ್ನುವ ಹಂಬಲ ಕವಿ ಗೋಪಾಲ ಕೃಷ್ಣ ಅಡಿಗರಿಗೆ ನನ್ನ ನುಡಿಯೊಳೇ ಬಣ್ಣಿಸುವ ಪದ್ದತಿಕೆ ಬರುವನಕ, ನನ್ನ ಬಾಳಿದು ನರಕ. ಇಷ್ಟು ತೀವ್ರವಾದ ಹಂಬಲವು ತಾಂತ್ರಿಕ ಎಚ್ಚರವಾಗಿ ಬೆಳೆಯಲೇ ಬೇಕು. ಅಂದರೆ, ತಾನು ಬರೆಯುತ್ತಿರುವ ಕಾವ್ಯ ಮಾರ್ಗವು ಅದರಲ್ಲಿ ಬರೆಯುತ್ತಿರುವಾಗಲೇ ಒಳಗಿಂದ ಅಸಂತೃಪ್ತಿಯನ್ನು ಉಂಟು ಮಾಡುತ್ತಲೇ ಇರುತ್ತದೆ. ಈ ಅಸಂತೃಪ್ತಿಯೇ ಹೊಸಹಾದಿಯನ್ನು ಹುಡುಕುವ ಪ್ರಯತ್ನವಾಗಿ ಬೆಳೆಯುತ್ತದೆ. ಇಂತಹ ಕಾವ್ಯದ ಹುಡುಕಾಟದ ಮಾರ್ಗದಲ್ಲಿ ನಡೆದವರು ಚಿಂತಕರಾದ ಲಕ್ಷ್ಮೀಶ ತೋಳ್ಫಾಡಿಯವರು. 

ಗೋಪಾಲಕೃಷ್ಣ ಅಡಿಗರ ಪ್ರಸಿದ್ದವಾದ 'ಮೋಹನ ಮುರಳಿ” ಕವಿತೆಯಲ್ಲಿನ ಹೊಳಹನ್ನು ಕುರಿತು,  ಕೊಳಲಿನ ಮೋಹಕವಾದ ಕರೆ ಮಾತ್ರ ಯಾರಿಗೂ ಕೇಳಿಸಿಲ್ಲ. ಕೇಳಿಸಿತೇನು? 'ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?' - ಎನ್ನುವ ಪ್ರಶ್ನೆಯಲ್ಲಿರುವ ಜಿಜ್ಞಾಸೆಯನ್ನು ಹಾಗೂ ಅಡಿಗರ ಅನೇಕ ಕವಿತೆಗಳಲ್ಲಿನ ಕಾವ್ಯಮಾರ್ಗವನ್ನು ಲೇಖಕರು ತಮ್ಮ  ಅಭಿಮತ,ಹಾಗೂ ಅಡಿಗರ ಹಲವು ಕಾವ್ಯಗಳ ಕುರಿತು ತಮ್ಮ ಕಾವ್ಯಲಹರಿಯ ಸ್ವಗತವನ್ನು ಇಲ್ಲಿ ವ್ಯಕ್ತಪಡಿಸಿದ್ಧಾರೆ. 

 

About the Author

ಲಕ್ಷ್ಮೀಶ ತೋಳ್ಪಾಡಿ

ಲಕ್ಷ್ಮೀಶ ತೋಳ್ವಾಡಿ ಕೃಷಿಕ, ಚಿಂತಕ ಮತ್ತು ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರದು ತೋಳ್ಳಾಡಿತ್ತಾಯ ವೈದಿಕ ಮನೆತನ, ಉತ್ತುಬಿತ್ತು ಗೇಯುವ ಕಾಯಕ. ಆಡುಭಾಷೆ ತುಳು. ವೈದಿಕ ಮತ್ತು ವೈಚಾರಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿದರು. ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ.ರಂ. ನಾಗರಾಜ  ಅವರ ಒಡನಾಟ ಸಿಕ್ಕಿತ್ತು. ಭಕ್ತಿ-ವಿಭಕ್ತಿಗಳ ನಡುವಿನ ಆಧ್ಯಾತ್ಮಿಕ ವ್ಯಾಕರಣದ ಹುಡುಕಾಟ ತೀವ್ರಗೊಂಡು ಶಿವಮೊಗ್ಗಕ್ಕೆ ತೆರಳಿದಾಗ ಅಲ್ಲಿ ಸತ್ಯಕಾಮರ ಒಡನಾಟ ದಕ್ಕಿತು. ಪುತ್ತೂರಿನ ಅಜ್ಜನ ಸಾಧನೆಯ ಗವಿಯೊಳಗೆ ಕಂಡ ಬೆಳಕು ಕೆಲಕಾಲ ಇವರನ್ನು ಕೈಹಿಡಿದು ನಡೆಸಿತು. ಬುದ್ಧ, ಗಾಂಧಿಯವರ ಮಧ್ಯಮ ...

READ MORE

Related Books