ದೇವರು- ಎ.ಎನ್. ಮೂರ್ತಿರಾವ್

Author : ಎ.ಎನ್. ಮೂರ್ತಿರಾವ್

Pages 200

₹ 150.00




Year of Publication: 2014
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು

Synopsys

‘ದೇವರು’ ಹಿರಿಯ ಲೇಖಕ ಎ.ಎನ್. ಮೂರ್ತಿರಾವ್ ಅವರ ವೈಚಾರಿಕ ಬರಹಗಳ ಸಂಕಲನ. ದೇವರ ಅಸ್ತಿತ್ವದ ಕುರಿತು ಒಬ್ಬೊಬ್ಬರದೂ ಒಂದೊಂದು ಅಭಿಪ್ರಾಯ. ಇದು ಪುರಾತನ ಕಾಲದಲ್ಲಿಂದಲೂ ನಡೆದುಬಂದಿರುವ ಚರ್ಚೆ. ಆದರೆ ಈ ಪ್ರಶ್ನೆಗೆ ಸ್ಪಷ್ಟ ಉತ್ತರವೆಂಬುದಿಲ್ಲ. ಇದೇ ಪ್ರಶ್ನೆಯನ್ನು ಮುಂದಿಟ್ಟು ದೇವರ ಅಸ್ತಿತ್ವ, ಸ್ವರೂಪದ ಬಗ್ಗೆ ವಿಮರ್ಶಿಸಿ ಬರೆದ ಕೃತಿಯೇ “ದೇವರು”. ಮಾನವರಲ್ಲಿ ದೇವರ ಬಗ್ಗೆ ಬೆಳೆದ ಕಲ್ಪನೆ, ಆಚರಣೆ, ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ ಇವರ ಬಗ್ಗೆ ಪ್ರಚಲಿತ ಇರುವ ಕಥೆಗಳ ಮೂಲಕ ತೆಗೆದ ಗುಣಾವಾಗುಣಗಳಿಂದ ಇವರು ನಮಗೆ ಬೇಕಿರುವ ದೇವರಲ್ಲವೆಂದು, ನಮಗೆ ಬೇಕಿರುವುದು ಭಕ್ತಿಯನ್ನೂ ಬೇಡದ ಪ್ರೇಮ ಸ್ವರೂಪನಾದ ದೇವರು, ಅಂತಹ ದೇವರಿದ್ದರೆ ಒಳ್ಳೆಯದೆಂದು ಆದರೆ ಇರದಿರುವುದು ವಿಷಾದನೀಯವೆಂದು, ಉಪನಿಷತ್ತಿನ ಬ್ರಹ್ಮದ ಮಿತಿಯನ್ನು ತಿಳಿಸಿ ಕೊನೆಗೆ “ದೇವರೆಂದರೆ ಮೌಲ್ಯಗಳು, ಅವುಗಳ ಧ್ಯಾನ, ಕಾರ್ಯಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರುವುದೇ ಧರ್ಮ”ಎಂದು ಕಂಡುಕೋಳ್ಳುವ ಮೂಲಕ ಕೃತಿಯನ್ನು ಮುಗಿಸಿದ್ದಾರೆ. ಆಸ್ತಿಕರಿಗೆ ನೋವುಂಟಾಗದಂತೆ ಕೃತಿ ರಚಿಸಿರುವುದು ಮೂರ್ತಿರಾಯರ ಹೆಗ್ಗಳಿಕೆ. ಅಸ್ತಿಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ತುಂಬಾ ಅಚ್ಚುಕಟ್ಟಾಗಿ ಮಾಡಿರುವುದು ಈ ಕೃತಿಯಲ್ಲಿ ಕಂಡುಬರುತ್ತದೆ.

About the Author

ಎ.ಎನ್. ಮೂರ್ತಿರಾವ್
(18 June 1900 - 23 August 2003)

ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್  ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...

READ MORE

Related Books