ಜ್ಞಾನ ಸಿಂಚನ

Author : ಶರಣಬಸಪ್ಪ ವಡ್ಡನಕೇರಿ

Pages 72

₹ 80.00




Year of Publication: 2017
Published by: ಅಭಿಷೇಕ ಪ್ರಕಾಶನ
Address: # 180/1A, ಸುಭಾಷ್ ಚೌಕ್, ಎಸ್.ಬಿ.ಆರ್ ರಸ್ತೆ, ಕಲಬುರಗಿ-585103
Phone: 9686153485

Synopsys

ಜ್ಞಾನ ಸಿಂಚನ. ಈ ಕೃತಿಯು ಶಿಷ್ಠ ಹಾಗೂ ಭಾಷಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹವಾಗಿದೆ. ಡಾ. ನಾಗಪ್ಪ ಟಿ. ಗೋಗಿ ಪ್ರಧಾನ ಸಂಪಾದಕರು ಹಾಗೂ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಸಂಪಾದಕರು. ಕನ್ನಡ ಸಾಹಿತ್ಯ ತನ್ನ ಹಿರಿಮೆ ಗರಿಮೆಯಿಂದ ಜಗತ್ತಿನ ಜನರ ಕಣ್ಣು ಸೆಳೆದಿದೆ. ಮನವನ್ನು ತಣಿಸಿದೆ.ಹೊಸಗನ್ನಡದ ಸಂದರ್ಭದಲ್ಲಿ ಕಾವ್ಯ,ಕತೆ,ಕಾದಂಬರಿ, ನಾಟಕ, ಮೊದಲಾದ ಶಿಷ್ಟ  ಸಾಹಿತ್ಯ ಪ್ರಕಾರಗಳು ಮತ್ತು ನೇಕಾರಿಕೆ, ಹಬ್ಬ, ಕನ್ನಡ ಶಾಸ್ತ್ರೀಯ ಭಾಷೆ, ದಲಿತರ ಚಳವಳಿಗಳು ಮತ್ತು ವಚನ ಸಾಹಿತ್ಯ ಹಾಗೂ ಕೀರ್ತನೆಗಳ ಪರಿಕಲ್ಪನೆಯ ಜ್ಞಾನ ವಿಸ್ತರಣೆ ಭಾಗವಾಗಿಯೇ ಇಲ್ಲಿ ಸಂಚಯ ಗೊಂಡಿವೆ. ಈ ಎಲ್ಲಾ ಲೇಖನಗಳು ಸಮಕಾಲೀನ ಸಂದರ್ಭಕ್ಕೆ ಒರೆಗೆ ಹಚ್ಚಿ ವಿಮರ್ಶಿಸುವ ಕ್ರಮ ಅಧ್ಯಯನಕ್ಕೆ ಯೋಗ್ಯವಾಗಿವೆ. ನಾಡಿನಾದ್ಯಂತ ಇರುವ ಸಂಶೋಧನಾಸಕ್ತರ ಗಮನಸೆಳೆದಿವೆ. 

ಸಾಹಿತಿ ಡಿ. ನಾರಾಯಣ ರೋಳೆಕರ್ ಅವರು ಕೃತಿಗೆ ಬೆನ್ನುಡಿ ಬರೆದು ‘ಜಾಗತೀಕರಣದಿಂದ ಗುಡಿ ಕೈಗಾರಿಕೆಗಳು ವಿಶೇಷವಾಗಿ ನೇಕಾರಿಕೆಯ ಮೇಲೆ ಬೀರಿದ ದುಷ್ಟರಿಣಾಮಗಳ ಕುರಿತ ಜಿಜ್ಞಾಸೆಯು ಈ ಬರಹಗಳ ಜೀವಾಳವಾಗಿವೆ. ದಲಿತ ಚಳವಳಿ, ವಚನ ಸಾಹಿತ್ಯ ಹುಟ್ಟು, ಚಳವಳಿಯಾಗಿ ಬೆಳೆದ ಪರಿ ಅನನ್ಯವಾಗಿರುವುದನ್ನು ಬಿಂಬಿಸುತ್ತವೆ. ಇಲ್ಲಿಯ ಬರಹಗಾರರು ಸಂಶೋಧನಾ ವಿದ್ಯಾರ್ಥಿಗಳೇ ಆಗಿದ್ದರಿಂದ, ಪ್ರತಿ ಬರಹಕ್ಕೂ ಸಂಶೋಧನಾ ದೃಷ್ಟಿ ಇದೆ. ಹೀಗಾಗಿ, ಬರಹಗಳು ಮೌಲಿಕ ಹಾಗೂ ಸಂಶೋಧನಾತ್ಮಕವಾಗಿವೆ’ ಎಂದು ಪ್ರಶಂಸಿಸಿದ್ದಾರೆ.    
 

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books