ಬಾರುಕೋಲು- ಪ್ರೊ.ಎಂ.ಡಿ.ನಂಜುಂಡಸ್ವಾಮಿ ಚಿಂತನೆ

Author : ನಟರಾಜ ಹುಳಿಯಾರ್

Pages 238

₹ 200.00




Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಿವಾ ಎಮ್ಮಿಗನೂರ್, ಬಳ್ಳಾರಿ - 583113
Phone: 9480353507

Synopsys

‘ಬಾರುಕೋಲು’ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಚಿಂತನೆ ಕೃತಿಯನ್ನು ಲೇಖಕ ನಟರಾಜ್ ಹುಳಿಯಾರ್ ಹಾಗೂ ರವಿಕುಮಾರ್ ಬಾಗಿ ಅವರು ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಬಾರ್ ಕೋಲ್ ನನ್ನ ರೂಲ್ ಆಫ್ ಲಾ!’ ಇದು ಶಿವಮೊಗ್ಗದ ರೈತ ಸಮಾವೇಶದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಘೋಷಿಸಿದ ಹೊಸ ರೈತ ಕಾನೂನು. ಇಂಡಿಯಾದ ಅನನ್ಯ ರೈತ ನಾಯಕರೂ, ಕ್ರಿಯಾಶೀಲ ಸಮಾಜವಾದಿ ಚಿಂತಕರೂ ಆದ ಎಂ.ಡಿ.ಎನ್ ಅವರ ಹಲವು ದಿಕ್ಕಿನ ಚಿಂತನೆಗಳ ಸಂಕಲನ ಬಾರುಕೋಲು. ಇಲ್ಲಿ ಅವರ ಚಾಟಿಯೇಟಿನಂಥ ಮಾತು, ಡೈರೆಕ್ಟ್ ಆ್ಯಕ್ಷನ್ ನ ಖದರ್, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಆಳವಾದ ಚಿಂತನೆಗಳು ಎಲ್ಲವೂ ಇವೆ ಎಂದಿದ್ದಾರೆ ನಟರಾಜ್ ಹುಳಿಯಾರ್. ಜೊತೆಗೆ ರೈತ ಚಳುವಳಿಯ ಮುಂದಿನ ಘಟ್ಟಗಳು, ಬಗರ್ ಹುಕುಂ ಸಾಗುವಳಿ, ಬೀಜ ಸತ್ಯಾಗ್ರಹ, ಜಲವಿವಾದ, ಡಂಕಲ್ ಪ್ರಸ್ತಾವನೆ, ಜಾತಿವಿನಾಶ, ಜಾಗತೀಕರಣ, ಪ್ರಾದೇಶಿಕ ರಾಜಕೀಯ ಪಕ್ಷ, ಭಾಷೆ ಈ ಎಲ್ಲದರ ಬಗ್ಗೆ ಒರಿಜಿನಲ್ ಒಳನೋಟಗಳ ಬರಹಗಳಿವೆ. ಲೋಹಿಯಾವಾದ, ಗಾಂಧೀವಾದ, ಧರ್ಮ, ಕುವೆಂಪು ಮಾರ್ಗಗಳ ವಿಶ್ಲೇಷಣೆಗಳೂ ಇಲ್ಲಿವೆ. ಹೋರಾಟಗಳ ನಡುವೆ ಮೂಡಿದ ಇಲ್ಲಿನ ಹೋರಾಟಗಳ ನಡುವೆ ಮೂಡಿದ ಇಲ್ಲಿನ ಅಪ್ಪಟ ಕನ್ನಡ ಸಮಾಜವಾದಿ ಚಿಂತನೆಗಳು ಎಲ್ಲ ಕಾಲದ ಚಳುವಳಿಗಳ ನಾಯಕರು, ರಾಜಕಾರಣಿಗಳು, ಹೋರಾಟಗಾರರು ಹಾಗೂ ಚಿಂತಕ, ಚಿಂತಕಿಯರಿಗೆ ಹೊಸ ಹಾದಿ ತೋರಬಲ್ಲವು ಎಂದಿದ್ದಾರೆ ನಟರಾಜ್ ಹುಳಿಯಾರ್.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books