ವೈಚಾರಿಕತೆ ಮತ್ತು ಸಾಹಿತ್ಯ

Author : ಚಿ.ಸಿ. ನಿಂಗಣ್ಣ

Pages 112

₹ 100.00




Year of Publication: 2017
Published by: ಹೆಂಬಾಡಿ ಪ್ರಕಾಶನ
Address: ರಾಜಾಪುರ, ಕಲಬುರಗಿ 585 109

Synopsys

ಕನ್ನಡ ಸಾಹಿತ್ಯ ಕೋಶದಂತಹ ಪ್ರಮುಖ ಕೆಲಸ ಮಾಡಿದ ಚಿ.ಸಿ. ನಿಂಗಣ್ಣ ಅವರ ವೈಚಾರಿಕ ಬರಹಗಳ ಕೃತಿಯಿದು. ಈ ಪುಸ್ತಕದಲ್ಲಿ ವೈಚಾರಿಕ ಸಂಗತಿಗಳಿಗೆ ಸಂಬಂಧಿಸಿದ ಆರು ಲೇಖನಗಳಿವೆ. ವೈಚಾರಿಕತೆ ಮತ್ತು ಸಾಹಿತ್ಯದ ನಡುವಿನ ಸಂಬಂಧವನ್ನು ವಿವರಿಸಲು ಪ್ರಯತ್ನಿಸುತ್ತವೆ. ವೈಚಾರಿಕತೆಯ ಚಾರಿತ್ರಿಕ ಬೆಳವಣಿಗೆಯ ಹಿನ್ನೋಟ ಬೀರುವ ನಿಂಗಣ್ಣ ಅವರ ಬರಹಗಳು ವಸ್ತುವಿನ ದೃಷ್ಟಿಯಿಂದ ಗಮನ ಸೆಳೆದರೂ ಆಳಕ್ಕೆ ಇಳಿಯದೇ ಮೇಲುಸ್ತರದ ರಚನೆಗಳಾಗಿಯೇ ಉಳಿದು ಬಿಡುತ್ತವೆ. ವೈಚಾರಿಕತೆ ಮತ್ತು ಸಾಹಿತ್ಯದಂತಹ ಗಂಭೀರ ವಿಷಯದಲ್ಲಿ ಅಧ್ಯಯನ ನಡೆಸಲು ಅಗತ್ಯವಿರುವ ಪೂರ್ವಸಿದ್ಧತೆಯ ಕೊರತೆ ಎದ್ದು ಕಾಣಿಸುತ್ತದೆ. ತೆಳುವಾದ ಆಲೋಚನಾ ಕ್ರಮವನ್ನು ವಸ್ತುವಿಗೆ ದೊರಕಿಸಬೇಕಾದ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ವಸ್ತುವಿನ ಜೊತೆಗೆ ನಿರ್ದಿಷ್ಟವಾದ ಅಂತರ ಇಟ್ಟು ನೋಡುವುದು ಸಾಧ್ಯವಾಗದೇ ಇರುವುದು ’ಮಿತಿ’ಯಾಗಿಯೇ ಕಾಣಿಸುತ್ತದೆ. ಮೇಲುಸ್ತರದ ಆಲೋಚನಾ ಕ್ರಮ ಮತ್ತು ಭಾಷೆಯಲ್ಲಿ ಅದನ್ನು ಕಟ್ಟಿಕೊಡಲು ಸಾಧ್ಯವಾಗದೇ ಇರುವುದು ಢಾಳಾಗಿ ಎದ್ದು ಕಾಣುತ್ತದೆ. ತೆಳುವಾದ ನಿರೂಪಣೆ-ಜನಪ್ರಿಯ ಯೋಚನಾ ಲಹರಿಯಿಂದ ದೂರ ಸಾಗುವುದು ಲೇಖಕರಿಗೆ ಸಾಧ್ಯವಾಗಿಲ್ಲ. ಬಸವಣ್ಣನವರ ಬಗ್ಗೆ ತೋರುವ ಅದಮ್ಯ ಪ್ರೀತಿ-ಗೌರವ ಉಳಿದ ಚಿಂತಕರ ಬಗ್ಗೆ ಸಾಧ್ಯವಾಗದೇ ಇರುವುದು ಮಿತಿಯನ್ನು ಮೀರಲು ಸಾಧ್ಯವಾಗದೇ ಇರುವುದರ ದ್ಯೋತಕವೇ ಸರಿ.

ಅಶ್ವಘೋಷನಿಂದ ಆರಂಭಿಸಿ ಸಿದ್ಧಲಿಂಗಯ್ಯನವರ ’ಏಕಲವ್ಯ’ದ ವರೆಗೂ ವೈಚಾರಿಕತೆಯ ಚಾಚು ಬೆಳೆದಿರುವ ಬಗೆಯನ್ನು ವಿವರಿಸುವ ನಿಂಗಣ್ಣ ಅವರು ’ಒಳನೋಟ’ ನೀಡುವುದು ಸಾಧ್ಯವಾಗಿಲ್ಲ. ಬರವಣಿಗೆಯ ಬಗೆಗಿರುವ ಧೋರಣೆಯು ಅವರನ್ನು ವಿಸ್ತರಿಸದಂತೆ ತಡೆದು ನಿಲ್ಲಿಸಿದೆ. ಕ್ಲೇಷೆ ಎನ್ನಿಸುವ ಪದಗಳು, ವಾಕ್ಯಗಳು, ವಿಚಾರಗಳು ಹೊಸದೇನನ್ನೂ ಹೇಳಲು ಸಾಧ್ಯವಾಗದಂತೆ ಮಾಡಿವೆ. ರೂಢಿಗತ ವಿಚಾರ ಸರಣಿಯನ್ನೇ ಮುಂದುವರೆಸುವ ಕೃತಿಯಿದು. ಓದಿಸಿಕೊಂಡು ಹೋಗುವ ಗುಣ ಇದ್ದರೂ ಅದಕ್ಕಿಂತ ಹೆಚ್ಚಿನದನ್ನು ನೀಡುವುದು ಸಾಧ್ಯವಾಗಿಲ್ಲ.

About the Author

ಚಿ.ಸಿ. ನಿಂಗಣ್ಣ

ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ  ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...

READ MORE

Related Books