ಕೋಮುಹಿಂಸೆ ನಿಯಂತ್ರಣಾ ಮಸೂದೆ 2011

Author : ಫಕೀರ್ ಮುಹಮ್ಮದ್ ಕಟ್ಪಾಡಿ

Pages 70

₹ 40.00




Year of Publication: 2011
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

‘ಕೋಮುಹಿಂಸೆ ನಿಯಂತ್ರಣಾ ಮಸೂದೆ 2011’ ಕೃತಿಯು ಕೋಮುವಾದ ಕುರಿತ ಲೇಖನಗಳನ್ನು ಒಳಗೊಂಡ ಸಂಕಲನವಾಗಿದೆ. ಮೊದಲು ಹೂವಿನಂತಿದ್ದು ಮುಂದೆ ಹಾವಿನಂತೆ ಬದಲಾಗಿ ಒಂದು ಸಂಸಾರದ ನೆಮ್ಮದಿ ಕೆಡಿಸಿದ ಕಥನವನ್ನು ಕೃತಿಯು ಒಳಗೊಂಡಿದೆ. ಈ ದುರಂತಕ್ಕೆ ಮನೆಯವರಷ್ಟೇ ಅಲ್ಲದೆ ಇತರ ಜಾತಿ-ಧರ್ಮಗಳ ಜನರೂ ತಲೆತೂರಿಸಿ ತಮ್ಮ ಮಿತಿಯನ್ನು మిరి ಕೆಡುಕನ್ನುಂಟುಮಾಡುತ್ತಾರೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಿಯರೂ ತಮ್ಮಿಚ್ಛೆಯಂತೆ ಬದುಕುವ ಅವಕಾಶ ನೀಡಿದ್ದರೂ ಯಾಕೋ ಸಮಾಜ ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಂತಿಲ್ಲ. ಹಿಂದು-ಮುಸ್ಲಿಂ-ಕ್ರೈಸ್ತ ಮತಾನುಯಾಯಿಗಳು ಪರಸ್ಪರ ಪ್ರೀತಿ-ವಿಶ್ವಾಸ- ಗೌರವಗಳಿಂದ ಬದುಕಿರಬಾರದೆಂಬಂತೆ ಪರಸ್ಪರ ಮನಸ್ಸುಗಳನ್ನು ಅವೇ ಧರ್ಮಗಳ ಮೂಲಭೂತವಾದಿಗಳು ಕೆಡಿಸಿರುತ್ತಾರೆ. ಈ ಸಾಮಾಜಿಕ ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಸೌಹಾರ್ದತೆಯತ್ತ ಹೆಜ್ಜೆಯಿಡಬೇಕಾದ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಏರುದಾರಿ ಕಷ್ಟ; ಇಳಿಜಾರು ತುಂಬ ಸುಲಭ. ಆದರೂ ಸಮಾಜ ಮೇಲಿನ ಸ್ತರಕ್ಕೇರಬೇಕು, ಅಧಃಪತನದ ಕಡೆ ಇಳಿಯಬಾರದೆಂಬ ಚೊಕ್ಕ ಸಂದೇಶ ಇಲ್ಲಿದೆ. ವಿವೇಚನಾರಹಿತ ನಿರ್ಧಾರಗಳಿಂದಾಗಿ ಎಲ್ಲೆಂದರಲ್ಲಿ, ಚಿಕ್ಕಪುಟ್ಟ ಕಾರಣಗಳಿಗಾಗಿ ಕೋಮುಗಲಭೆ ಇಂದು ಸಾಮಾನ್ಯ ಎನ್ನುತ್ತದೆ ಈ ಕೃತಿ. 

About the Author

ಫಕೀರ್ ಮುಹಮ್ಮದ್ ಕಟ್ಪಾಡಿ
(25 June 1949)

ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...

READ MORE

Reviews

(ಹೊಸತು, ಮೇ 2012, ಪುಸ್ತಕದ ಪರಿಚಯ)

ಇದೊಂದು ಕೌಟುಂಬಿಕ ಚೌಕಟ್ಟಿನೊಳಗೆ ಚಿತ್ರಿಸಲ್ಪಟ್ಟ ದೈನಂದಿನ ಕಷ್ಟ-ಕೋಟಲೆಗಳನ್ನು ತೆರೆದಿಡುವ ಕಾದಂಬರಿ. ಮೊದಲು ಹೂವಿನಂತಿದ್ದು ಮುಂದೆ ಹಾವಿನಂತೆ ಬದಲಾಗಿ ಒಂದು ಸಂಸಾರದ ನೆಮ್ಮದಿ ಕೆಡಿಸಿದ ಕಥನ. ಈ ದುರಂತಕ್ಕೆ ಮನೆಯವರಷ್ಟೇ ಅಲ್ಲದೆ ಇತರ ಜಾತಿ-ಧರ್ಮಗಳ ಜನರೂ ತಲೆತೂರಿಸಿ ತಮ್ಮ ಮಿತಿಯನ್ನು మిరి ಕೆಡುಕನ್ನುಂಟುಮಾಡುತ್ತಾರೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಿಯರೂ ತಮ್ಮಿಚ್ಛೆಯಂತೆ ಬದುಕುವ ಅವಕಾಶ ನೀಡಿದ್ದರೂ ಯಾಕೋ ಸಮಾಜ ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಂತಿಲ್ಲ. ಹಿಂದು-ಮುಸ್ಲಿಂ-ಕ್ರೈಸ್ತ ಮತಾನುಯಾಯಿಗಳು ಪರಸ್ಪರ ಪ್ರೀತಿ-ವಿಶ್ವಾಸ- ಗೌರವಗಳಿಂದ ಬದುಕಿರಬಾರದೆಂಬಂತೆ ಪರಸ್ಪರ ಮನಸ್ಸುಗಳನ್ನು ಅವೇ ಧರ್ಮಗಳ ಮೂಲಭೂತವಾದಿಗಳು ಕೆಡಿಸಿರುತ್ತಾರೆ. ಈ ಸಾಮಾಜಿಕ ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಸೌಹಾರ್ದತೆಯತ್ತ ಹೆಜ್ಜೆಯಿಡಬೇಕಾದ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಏರುದಾರಿ ಕಷ್ಟ; ಇಳಿಜಾರು ತುಂಬ ಸುಲಭ. ಆದರೂ ಸಮಾಜ ಮೇಲಿನ ಸ್ತರಕ್ಕೇರಬೇಕು, ಅಧಃಪತನದ ಕಡೆ ಇಳಿಯಬಾರದೆಂಬ ಚೊಕ್ಕ ಸಂದೇಶ ಇಲ್ಲಿದೆ. ವಿವೇಚನಾರಹಿತ ನಿರ್ಧಾರಗಳಿಂದಾಗಿ ಎಲ್ಲೆಂದರಲ್ಲಿ, ಚಿಕ್ಕಪುಟ್ಟ ಕಾರಣಗಳಿಗಾಗಿ ಕೋಮುಗಲಭೆ ಇಂದು ಸಾಮಾನ್ಯ. ಇವನ್ನೆಲ್ಲ ನೋಡಿ ಇಂಥ ಅನಾಹುತಗಳಿಗೆ ಮತ್ತು ಸಂತ್ರಸ್ತರಿಗೆ ಮನ ಮಿಡಿಯುವ ಮಾನವೀಯ ಸ್ವಭಾವದ ಲೇಖಕಿ ಸಾರಾ ತಮ್ಮ ಬರಹಗಳ ಮೂಲಕ ನೊಂದ ಮನಸ್ಸುಗಳಿಗೊಂದಿಷ್ಟು ತಂಪೆರೆಯುತ್ತಿದ್ದಾರೆ.

 

Related Books