ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು

Author : ಶಿವರಾಮು ಕಾಡನಕುಪ್ಪೆ

Pages 156

₹ 130.00




Year of Publication: 2015
Published by: ರಾಜೇಂದ್ರ ಪ್ರಿಂಟರ್‍ಸ್ ಆಂಡ್ ಪಬ್ಲಿಷರ್‍ಸ್
Address: 12/1, ಈವನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು-570001
Phone: 6451135

Synopsys

ತಮ್ಮ ವಿಶಿಷ್ಟ ಚಿಂತನ ಶೈಲಿ ಮತ್ತು ಬರಹದಿಂದ ಗಮನ ಸೆಳೆದವರು ಶಿವರಾಮ ಕಾಡನಕುಪ್ಪೆ. ಶಿಕಾಕು ಹೆಸರಿನಲ್ಲಿ ಅವರು ಬರೆಯುತ್ತಿದ್ದ ಚಿಂತನ ಬರಹಗಳು ಸುಧಾ ನಿಯತಕಾಲಿಕದ ಮೂಲಕ ಜನಪ್ರಿಯವಾಗಿದ್ದವು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಅದಕ್ಕೂ ಮುನ್ನ ಅವರು ಬರೆದಿದ್ದ ಆಸ್ಪತ್ರೆ ಅನುಭವಗಳ ಸಂಗ್ರಹ ’ಆಸ್ಪತ್ರೆಯಲ್ಲಿ ಕಳೆದ ಐವತ್ನಾಲ್ಕು ದಿನಗಳು’. ಒಂದು ನಿಟ್ಟಿನಲ್ಲಿ ನೋಡಿದರೆ ಅನುಭವ ಕಥನದಂತೆಯೂ ಮತ್ತೊಂದು ನಿಟ್ಟಿನಲ್ಲಿ ನೋಡಿದರೆ ಆತ್ಮಕತೆಯಂತೆಯೂ ಕಾಣುವುದೇ ಕೃತಿಯ ವೈಶಿಷ್ಟ್ಯ. 

ಆಸ್ಪತ್ರೆಯ ಸೇವಾ ವ್ಯವಸ್ಥೆ, ವೈದ್ಯರ ಕರ್ತವ್ಯ ನಿಷ್ಠೆ, ಶುಶ್ರೂಶಕ, ಶುಶ್ರೂಶಕಿಯರ ಕಾರ್ಯತತ್ಪರತೆ, 'ಅಣ್ಣ ಅಕ್ಕಾ'ಗಳ ಸೇವಾಪರತೆಗಳ ವಿವರಣೆ  ಕೃತಿಯ ಮುಖ್ಯಭಾಗ. ದೇಹ ಕ್ಷೀಣಿಸುತ್ತಿದ್ದರೂ ಜಾಗೃತ ಮನಸ್ಸು ಏನನ್ನೆಲ್ಲಾ ಗಮನಿಸಿದೆ ಎಂಬುದಕ್ಕೆ ಕೃತಿ ಸಾಕ್ಷಿಯಾಗಿದೆ. ಸಾವನ್ನು ಕೂಡ ತಣ್ಣಗೆ ನಿರುದ್ವಿಗ್ನವಾಗಿ ನೋಡುತ್ತಿದ್ದುದರಿಂದಲೋ ಏನೋ ಕಾಡನಕುಪ್ಪೆ ಅವರಿಗೆ ಕ್ಷಣಕ್ಷಣವನ್ನೂ ಜೀವಿಸುವ, ಹಾಗೆ ಜೀವಿಸಿದ್ದನ್ನು ಅಕ್ಷರಕ್ಕೆ ಇಳಿಸುವುದು ಸಾಧ್ಯವಾಗುತ್ತಿತ್ತು. 

ಸಾಮಾನ್ಯ ಎನಿಸುವಂತಹ ಸಂಗತಿಗಳನ್ನೇ ಅಸಾಮಾನ್ಯ ಅನುಭವವಾಗಿಸುವ ’ಶಿಕಾಕು’ ಕೃತಿಯ ಮೂಲಕ ಉಸಿರಾಡುತ್ತಿದ್ದಾರೆ ಎನ್ನುವುದೇ ಓದುಗರ ಪಾಲಿಗೆ ಒಂದು ರೀತಿಯ ನೆಮ್ಮದಿ. 

About the Author

ಶಿವರಾಮು ಕಾಡನಕುಪ್ಪೆ
(09 August 1953 - 26 July 2018)

ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...

READ MORE

Related Books