ಕರ್ನಾಟಕ ಕುಲಪುರೋಹಿತ

Author : ಸಂಗಮೇಶ ತಮ್ಮನಗೌಡ್ರ

Pages 56

₹ 40.00




Year of Publication: 2015
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಾಂಸ್ಕೃತಿಕವಾಗಿ ಒಂದಾಗಿಸಲು ಕರ್ನಾಟಕದ ಕುಲಪುರೋಹಿತ ಎಂದೇ ಖ್ಯಾತಿಯ ಆಲೂರು ವೆಂಕಟರಾಯರ ಕನಸು ಈವರೆಗೂ ಈಡೇರಿಲ್ಲ. ಇದಕ್ಕೆ ಕನ್ನಡಿಗರ ಅಭಿಮಾನ ಶೂನ್ಯತೆ, ಉದಾಸೀನತೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹೀಗೆ ಏನೆಲ್ಲ ಕಾರಣಗಳಿರಬಹುದು. ಆದರೆ, ಸುಂದರ ಕರ್ನಾಟಕದ ಕನಸು ಕಂಡಿದ್ದ ಆಲೂರು ವೆಂಕಟರಾಯರ ಕಳಕಳಿ, ಶ್ರಮ, ಹೋರಾಟ ಕನ್ನಡಿಗರಾದ ಎಲ್ಲರಿಗೂ ಅಭಿಮಾನ ಮೂಡಿಸುವಂತಹದ್ದು. ಅವರ ಬದುಕು-ಬರೆಹಗಳು ಕನ್ನಡ ಭಾಷೆಯ ಉನ್ನತಿಗೆ, ಸಾಹಿತ್ಯ- ಸಂಸ್ಕೃತಿಯ ಪ್ರಸಾರಕ್ಕೆ ಮೀಸಲಾಗಿದ್ದವು. ವ್ಯಕ್ತಿಗತ ಸುಖವನ್ನು ಮರೆತು ಕನ್ನಡಿಗರ ಸುಭದ್ರ ಹಾಗೂ ನೆಮ್ಮದಿಯ ಜೀವನಕ್ಕಾಗಿ ಅವರು ಪಟ್ಟ ಶ್ರಮವನ್ನು ಸ್ಮರಿಸಲೇ ಬೇಕು. ಈ ನಿಟ್ಟಿನಲ್ಲಿ ಆಲೂರು ವೆಂಕಟರಾಯರ ಜೀವನ ವೃತ್ತಾಂತವನ್ನುಲೇಖಕ ಸಂಗಮೇಶ ತಮ್ಮನಗೌಡ್ರ ಅವರು ತೀರಾ ಸರಳವಾಗಿ ವಿವರಿಸಿದ ಕೃತಿ ಇದು.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books