ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರು ಬರೆದ ಆತ್ಮಕತೆ-ಸ್ಮೃತಿಪಟಲದಿಂದ ಸಂಪುಟ-3. ಕಾರಂತರು ‘ಸಮಾಜ ಮತ್ತು ನಾನು‘, ‘ಬಂಧುಮಿತ್ರರು ಮತ್ತು ನಾನು‘, ‘ನಾನು ಮತ್ತು ಕನಸು‘ಗಳಂತಹ ಅಧ್ಯಾಯಗಳಲ್ಲಿ ತಮಗೆ ಈ ನಂಟುಗಳು ಬೆಳೆದು ಬಂದಿದ್ದನ್ನು ವಿವರಿಸಿದ್ದಾರೆ. ತಮ್ಮ 60 ವರ್ಷದ ಸಾಹಿತ್ಯಕ ಸಾಧನೆಗಳು, ಅನುಭವಗಳನ್ನು ದಾಖಲಿಸಿದ್ದಾರೆ. ಸಮಾಜ ಬಂಧುಮಿತ್ರರು ಮತ್ತು ಲೇಖಕರ ಕನಸುಗಳಿಗೆ ಸಂಬಂಧಿಸಿದ ಅನೇಕ ವಿವರಗಳಿವೆ. ಸಾಮಾಜಿಕವಾಗಿ ಪ್ರಾಮುಖ್ಯತೆ ಪಡೆದ ವ್ಯಕ್ತಿಯ ವಿಚಾರಗಳು, ಅವರಿಂದ ಪಡೆದ ಪ್ರೇರಣೆಗಳು, ಋಣ ಹಾಗೂ ಕಹಿ ಅನುಭವಗಳನ್ನು ವಿವರಿಸಿದ್ದಾರೆ.
ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1979ರಲ್ಲಿ (ಪುಟ:409) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2023 Book Brahma Private Limited.