ಬೀchi ತಮ್ಮ ಆತ್ಮಕತೆ ’ನನ್ನ ಭಯಾಗ್ರಫಿ’ ಬರೆದದ್ದು ೧೯೭೪ರಲ್ಲಿ. ಸಾಹಿತಿ ಶ್ರೀರಂಗರಂತೆ ಆತ್ಮಕತೆಯಲ್ಲಿ ಇವರದೂ ಹಾಸ್ಯ ಶೈಲಿ.”ಹುಟ್ಟುತ್ತಲೇ ತಂದೆಯನ್ನು ನೀಗಿದ’ ಎಂಬ ಶಾಪ ಬಾಲಕ ಬೀchiಗೆ ಅಂಟಿಕೊಂಡಿತ್ತು. ಈ ಗಾಯ ಮಾಯಲು ಹಲವು ವರ್ಷಗಳೇ ಬೇಕಾದವು. ಬಾಲ್ಯದಲ್ಲಿಯೇ ಅವರು ದುಶ್ಚಟಗಳಿಗೆ ದಾಸರಾಗಿದ್ದು ಕೂಡ ಇಂತಹ ಕಾರಣಗಳಿಂದಲೇ ಎಂದು ತೋರುತ್ತದೆ.
ತಾವು ಪೊಲೀಸ್ ಇಲಾಖೆಗೆ ಸೇರಿದ್ದು, ಅಲ್ಲಿಂದ ಬೆಂಗಳೂರಿಗೆ ವರ್ಗವಾಗಿದ್ದು, ಅ.ನ.ಕೃ ಅವರಂತಹ ಸಾಹಿತ್ಯ ದಿಗ್ಗಜರ ಸ್ನೇಹ ಲಭಿಸಿದ್ದು, ಸಾಂಸಾರಿಕ ಸಂಗತಿಗಳು, ನಿವೃತ್ತಿ ಮತ್ತಿತರ ವಿಚಾರಗಳ ಬಗ್ಗೆ ಪ್ರಸ್ತಾಪವಿದೆ. ಆ ಎಲ್ಲ ಅಂಶಗಳಿಗೂ ಬೀchiತನದ ಸ್ಪರ್ಶ ಇದೆ.
©2025 Book Brahma Private Limited.