ಶಿಕ್ಷಕ ವೃತ್ತಿಯಲ್ಲಿ ನನ್ನ ಇಪ್ಪತ್ತು ವರ್ಷಗಳು

Author : ಸಂಗಮೇಶ ತಮ್ಮನಗೌಡ್ರ

Pages 67

₹ 50.00




Year of Publication: 2012
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ವೃತ್ತಿಯಿಂದ ಶಿಕ್ಷಕರು. ತಮ್ಮ ವೃತ್ತಿಯ 20 ವರ್ಷಗಳ ಸುದೀರ್ಘ ಅವಧಿಯಲ್ಲಿ ಬೋಧನೆ, ಕಲಿಕೆ, ಶಿಕ್ಷಕರ ಕರ್ತವ್ಯ, ಪಾಲಕರ ಕರ್ತವ್ಯ, ಸಮಾಜದಲ್ಲಿರುವ ಜನರ ಅಭಿಪ್ರಾಯಗಳು, ಆಡಳಿತದ ಒತ್ತಡ ಹೀಗೆ ಹತ್ತು ಹಲವು ದೃಷ್ಟಿಯಿಂದ ತಾವು ಕಂಡುಂಡ ಅನುಭವವನ್ನು ತಮ್ಮ ಆತ್ಮಕಥೆಯ 5ರ ಭಾಗವಾಗಿ ಈ ಕೃತಿಯನ್ನು ರಚಿಸಿದ್ದಾರೆ.

ಶಿಕ್ಷಕ ವೃತ್ತಿಗೂ ಮುನ್ನ ನನ್ನ ಬದುಕು, ಶಿಕ್ಷಕ ವೃತ್ತಿಯೊಂದಿಗೆ ಕಲಿಯುವ ಹಂಬಲ, ಸಮಯ ಪಾಲನೆ, ಕರ್ತವ್ಯ ಪ್ರಜ್ಞೆ, ನಾನು ವಿದ್ಯಾರ್ಥಿಗಳನ್ನು ಕಾಣುವ ಬಗೆ, ಶಿಕ್ಷಕ ವೃತ್ತಿಯೊಂದಿಗೆ ಸಂಘಟನೆ ಕೆಲಸ, ನಾನು ಬರೆದ ಪುಸ್ತಕಗಳ ಬಿಡುಗಡೆಯ ಅನುಭವಗಳು ಹೀಗೆ ತಾವು ವಿವಿದೆಡೆ ವರ್ಗವಾಗಿ ಹೋದ ಮತ್ತು ಅಲ್ಲಿಯ ಶಾಲೆ ಸೇವೆಯ ಅನುಭವಗಳು ಈ ಕೃತಿಯ ಜೀವಾಳವಾಗಿವೆ. ಇವು ಯಾರನ್ನೇ ಕುರಿತು ವ್ಯಂಗ್ಯ ನೋಟ ಬೀರಿ ಬರೆದ ಅನಿಸಿಕೆಗಳಲ್ಲ. ವೃತ್ತಿಯೊಂದಿಗೆ ಬರೆಹವೂ ಕೈಗೊಂಡಿದ್ದು ಸವಾಲೆಂಬಂತೆ ಸ್ವೀಕರಿಸಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books