ಮುಳ್ಳುಗಳ್ಳಿ

Author : ಆರ್.ಪಿ. ಹೆಗಡೆ

Pages 208

₹ 100.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಮುಳ್ಳುಗಳ್ಳಿ’ ಕೃತಿಯು ರೂಪನಾರಾಯಣ ಸೋನಕರ ಅವರ ಆತ್ಮಕಥನವಾಗಿದೆ. ಹಿಂದಿ ಮೂಲ ಕೃತಿಯನ್ನು ಆರ್.ಪಿ. ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಅಂಬೇಡ್ಕರ್ ದಲಿತರ ದನಿಯಾಗಿ ಬಂದು ಸಮಾನತೆಯ ಕಹಳೆಯೂದಿ ಪ್ರತಿಭಟಿಸದಿದ್ದಲ್ಲಿ ಅವರ ನೋವು - ಅವಮಾನಗಳೆಲ್ಲ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಕಳ್ಳಿಗಿಡದ ಮುಳ್ಳಿನಂತೆ ಚುಚ್ಚಿ ಚುಚ್ಚಿ ನೋಯಿಸುತ್ತಿದ್ದ ಹಿಂಸೆ ಮತ್ತು ಅಪಮಾನವನ್ನು ಸಹಿಸುತ್ತಲೇ ಸವರ್ಣಿಯರ ಕುಟಿಲಗಳಿಗೆ ದಿಟ್ಟ ಉತ್ತರ ನೀಡಿ ಕವಿ-ಸಾಹಿತಿಯಾಗಿ ಬೆಳೆದುನಿಂತವರು ರೂಪನಾರಾಯಣ ಸೋನಕರ. ತಾವು ಸ್ವತಃ ಅನುಭವಿಸಿದ ಆ ನೋವು ಹೇಗಿತ್ತೆಂದು ಈ ಆತ್ಮಕಥನದಲ್ಲಿ ನಿರೂಪಿಸಿದ್ದಾರೆ. ಮೇಲ್ವರ್ಗದವರ ಅಸಂಬದ್ಧ ನಿಯಮಗಳು, ಅಮಾನುಷ ವರ್ತನೆಗಳಿಂದ ದಿಕ್ಕೆಟ್ಟು ಕಂಗಾಲಾದ ಹಸಿ-ಬಿಸಿ ಘಟನೆಗಳನ್ನು ಸ್ಮರಿಸಿದ್ದಾರೆ. ಹೀಗೆ ನಡೆಸಿಕೊಂಡ ಸಮಾಜದ ಮೇಲೆ ಇವರಿಗೆ ರೋಷ - ದ್ವೇಷ - ಸಿಟ್ಟು - ಸೆಡವು - ಅಗೌರವ ಎಲ್ಲವೂ ಇವೆ. ಜಾತೀಯತೆಯ ಕರಾಳ ಹಸ್ತ ಎಷ್ಟು ಪ್ರಬಲವಾಗಿತ್ತೆಂದರೆ - ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಲೇಖಕರ ಸಹೋದರನಿಂದ ಈ ಪುಸ್ತಕದ ಪುಟ 70-71ರಲ್ಲಿ ವರ್ಣಿಸಿದಂತೆ ವಿಕೃತ ಮನಸ್ಸಿನ ತೃಪ್ತಿಗಾಗಿ ಮಾಡಬಾರದ ಕೆಲಸವೊಂದನ್ನು ಮಾಡಿಸಿತು. ಕಾದ ಕಬ್ಬಿಣಕ್ಕೆ ಹಲವು ಪೆಟ್ಟುಗಳು ಬಿದ್ದಾಗ ಅದು ಹರಿತವಾದ ಒಂದು ಆಯುಧವಾಗಿ ಮಾರ್ಪಡುತ್ತದೆಂಬ ವಿವರಣೆಯನ್ನೂ ಲೇಖಕರು ನೀಡಿದ್ದಾರೆ.

About the Author

ಆರ್.ಪಿ. ಹೆಗಡೆ - 29 January 2019)

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...

READ MORE

Reviews

(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)

ಹಿಂಸೆ - ದೌರ್ಜನ್ಯಗಳು ಅಷ್ಟಿಷ್ಟಲ್ಲ. ಅಂಬೇಡ್ಕರ್ ದಲಿತರ ದನಿಯಾಗಿ ಬಂದು ಸಮಾನತೆಯ ಕಹಳೆಯೂದಿ ಪ್ರತಿಭಟಿಸದಿದ್ದಲ್ಲಿ ಅವರ ನೋವು - ಅವಮಾನಗಳೆಲ್ಲ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಕಳ್ಳಿಗಿಡದ ಮುಳ್ಳಿನಂತೆ ಚುಚ್ಚಿ ಚುಚ್ಚಿ ನೋಯಿಸುತ್ತಿದ್ದ ಹಿಂಸೆ ಮತ್ತು ಅಪಮಾನವನ್ನು ಸಹಿಸುತ್ತಲೇ ಸವರ್ಣಿಯರ ಕುಟಿಲಗಳಿಗೆ ದಿಟ್ಟ ಉತ್ತರ ನೀಡಿ ಕವಿ-ಸಾಹಿತಿಯಾಗಿ ಬೆಳೆದುನಿಂತವರು ಶ್ರೀ ರೂಪನಾರಾಯಣ ಸೋನಕರ. ತಾವು ಸ್ವತಃ ಅನುಭವಿಸಿದ ಆ ನೋವು ಹೇಗಿತ್ತೆಂದು ಈ ಆತ್ಮಕಥನದಲ್ಲಿ ನಿರೂಪಿಸಿದ್ದಾರೆ. ಮೇಲ್ವರ್ಗದವರ ಅಸಂಬದ್ಧ ನಿಯಮಗಳು, ಅಮಾನುಷ ವರ್ತನೆಗಳಿಂದ ದಿಕ್ಕೆಟ್ಟು ಕಂಗಾಲಾದ ಹಸಿ-ಬಿಸಿ ಘಟನೆಗಳನ್ನು ಸ್ಮರಿಸಿದ್ದಾರೆ. ಹೀಗೆ ನಡೆಸಿಕೊಂಡ ಸಮಾಜದ ಮೇಲೆ ಇವರಿಗೆ ರೋಷ - ದ್ವೇಷ - ಸಿಟ್ಟು - ಸೆಡವು - ಅಗೌರವ ಎಲ್ಲವೂ ಇವೆ. ಜಾತೀಯತೆಯ ಕರಾಳ ಹಸ್ತ ಎಷ್ಟು ಪ್ರಬಲವಾಗಿತ್ತೆಂದರೆ - ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಲೇಖಕರ ಸಹೋದರನಿಂದ ಈ ಪುಸ್ತಕದ ಪುಟ ೭೦-೭೧ರಲ್ಲಿ ವರ್ಣಿಸಿದಂತೆ ವಿಕೃತ ಮನಸ್ಸಿನ ತೃಪ್ತಿಗಾಗಿ ಮಾಡಬಾರದ ಕೆಲಸವೊಂದನ್ನು ಮಾಡಿಸಿತು. ಕಾದ ಕಬ್ಬಿಣಕ್ಕೆ ಹಲವು ಪೆಟ್ಟುಗಳು ಬಿದ್ದಾಗ ಅದು ಹರಿತವಾದ ಒಂದು ಆಯುಧವಾಗಿ ಮಾರ್ಪಡುತ್ತದೆಂಬ ವಿವರಣೆಯನ್ನೂ ಲೇಖಕರು ನೀಡಿದ್ದಾರೆ. ಈ ಆತ್ಮಕಥೆ ಮರಾಠಿಯ ಉತ್ತಮ ದಲಿತ ಆತ್ಮಕಥೆಗಳಲ್ಲೊಂದೆಂದು ಅಭಿಪ್ರಾಯಪಡಲಾಗಿದೆ. ಮರಾಠಿಯಲ್ಲಿನ ಇತರ ದಲಿತರ ಆತ್ಮಚರಿತ್ರೆಗಳನ್ನು ನವಕರ್ನಾಟಕ ಪ್ರಕಟಿಸಿದೆ.

Related Books