ಕುಲುಮೆ

Author : ರಹಮತ್ ತರೀಕೆರೆ

Pages 312

₹ 330.00




Year of Publication: 2023
Published by: ಅಹರ್ನಿಶಿ ಪ್ರಕಾಶನ
Address: ಅಹರ್ನಿಶಿ ಪ್ರಕಾಶನ, ಅಂಚೆ ಕಚೇರಿ ರಸ್ತೆ, ಕೋಟೆ, ಶಿವಮೊಗ್ಗ - 577202
Phone: 9449174662

Synopsys

‘ಕುಲುಮೆ’ ಸಂಶೋಧಕ, ವಿಮರ್ಶಕ, ಲೇಖಕ ರಹಮತ್ ತರೀಕೆರೆ ಅವರ ಆತ್ಮಕಥೆ. ಈ ಕೃತಿಗೆ ರಹಮತ್ ಅವರದೇ ಬೆನ್ನುಡಿ ಇದ್ದು, ಈ ಬಾಳಕಥನವನ್ನು 'ಕುಲುಮೆ' ಎಂದು ಕರೆದಿರುವೆ. ಕಾರಣ, ನಮ್ಮ ಕುಟುಂಬದ ಕಸುಬು ಕಮ್ಮಾರಿಕೆ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು, ಹೆತ್ತದ್ದೆಯಂತೆ ಎದೆಹಾಲು ಕುಡಿಸಿ ನಮ್ಮನ್ನು ಮೊರೆಯಿತು; ಆತ್ಮಸಂಗಾತಿಯಂತೆ ವಿವಿಧ ಜಾತಿ ವೃತ್ತಿ ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎಂದಿದ್ದಾರೆ.

ಹಾಗೇ ಕುಲುಮೆಯ ಕಮ್ಮಟದಲ್ಲಿ ಆಕಾರರಹಿತ ಕಪ್ಪು ಲೋಹವು ಕೆಂಪಗೆ ಕಾಯುತ್ತದೆ. ಕಡಿಸಿಕೊಂಡು ಬಡಿಸಿಕೊಂಡು ಹೊಸ ಸಲಕರಣೆಯಾಗಿ ರೂಪಾಂತರ ಪಡೆಯುತ್ತದೆ. ಇಲ್ಲಿ ಶ್ರಮ ಮಾತ್ರವಲ್ಲ, ಕಲ್ಪನೆ ಮತ್ತು ತಂತ್ರಗಾರಿಕೆಗಳೂ ಇವೆ; ಒಂದನ್ನು ಮತ್ತೊಂದನ್ನಾಗಿ ಪರಿವರ್ತಿಸುವ ಸೃಜನಶೀಲ ಮಾಟವಿದೆ. ಇದು ಅನುಭವ-ಕಲ್ಪನೆ-ಚಿಂತನೆಗಳು ಸಂಗಮಿಸಿ ಕಲಾಕೃತಿ ಸೃಷ್ಟಿಗೊಳ್ಳುವುದಕ್ಕೆ ಸಮೀಪವಾಗಿದೆ.

ನನ್ನ ಪಾಲಿಗೆ ದಕ್ಕಿದ ಬಾಳನ್ನು ಭರಪೂರವಾಗಿ ಅನುಭವಿಸಿದೆ. ಅದರ ಅಪೂರ್ವ ಲೀಲೆಗೆ ಬೆರಗಾದೆ. ದುಗುಡಗಳು ಘಾತಿಸಿದ್ದುಂಟು; ಬವಣೆಗಳು ಸುಸ್ತು ಮಾಡಿದ್ದುಂಟು; ಅಸುರಕ್ಷತೆ ಕಾಡಿದ್ದುಂಟು; ಉತ್ಕಟವಾದ ಮಿತಿ ಮೈಮರೆಸಿದ್ದುಂಟು. ಹೀಗಾಗಿಯೇ ಕುಟುಂಬ ಬೀದಿ ಊರು ಸೀಮೆಗಳನ್ನು ಪ್ರತಿಫಲಿಸುವ ಸದರಿ ಕಥನವು, ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನತತ್ವದ ಹುಡುಕಾಟ ಆಗಬೇಕು ಎಂದು ಹಂಬಲಿಸಿರುವೆ ಎಂದಿದ್ದಾರೆ ಲೇಖಕ ರಹಮತ್ ತರೀಕೆರೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books