ನಾಡಿನ ಸಾಕ್ಷಿಪ್ರಜ್ಞೆಯಂತೆ ಇದ್ದವರು ವಿಚಾರವಾದಿ, ಶಿಕ್ಷಣತಜ್ಞ, ಗಾಂಧಿವಾದಿ ಎಚ್. ನರಸಿಂಹಯ್ಯ. 'ಹೋರಾಟದ ಹಾದಿ' ಅವರ ಆತ್ಮಕತೆ. ಆದರೆ ಇದು ಕೇವಲ ಆತ್ಮಕತೆಯಲ್ಲ. ಸ್ವಾತಂತ್ಯ್ರ ಚಳವಳಿಯ ಕಥನ, ಹಲವು ಶಿಕ್ಷಣಸಂಸ್ಥೆಗಳು ಕಣ್ಣುಬಿಟ್ಟ ಕತೆ, ಸಾಮಾನ್ಯ ಹುಡುಗನೊಬ್ಬ ಅಸಾಮಾನ್ಯನಾದ ಯಶೋಗಾಥೆ.
ಶಿಸ್ತು ಮತ್ತು ಸರಳತೆಗೆ ಎಚ್ಚೆನ್ ಅವರು ಮತ್ತೊಂದು ಹೆಸರು. ಕರ್ನಾಟಕದ ಮೂಡಲಸೀಮೆಯ ಹುಡುಗನೊಬ್ಬ ಅಮೆರಿಕ್ಕೆ ಹೋದರೂ ಉಪ್ಪಿಟ್ಟು ತಿನ್ನುವ, ಗಾಂಧಿಟೊಪ್ಪಿಯನ್ನೇ ತೊಡುವ, ಫಿಸಿಕ್ಸ್ನಲ್ಲಿ ಫಿಲಾಸಫಿ ಕಾಣುವ ಪುಸ್ತಕ ತರುಣ- ತರುಣಿಯರು ಓದಲೇಬೇಕಾದ ಕೃತಿ.
©2025 Book Brahma Private Limited.