ಕನ್ನಡ ಸಾಹಿತ್ಯ ವೇದಿಕೆಯಲ್ಲಿ ವಿಡಂಬಾರಿ ಎಂದೇ ಖ್ಯಾತರಾದ ವಿಷ್ಣು ಜಿ. ಭಂಡಾರಿಯವರು ತೀರಾ ಬಡತನದ ದೇವದಾಸಿ ಕುಟುಂಬದಿಂದ ಬಂದವರು. ಕೇವಲ ಮೂರನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲಿಕ್ಕೆ ಸಾಧ್ಯವಾಗಿ, ಅಂಚೆ ಇಲಾಖೆಯಲ್ಲಿ ಪುಟ್ಟ ನೌಕರಿಗೆ ತಮ್ಮ ಬದುಕನ್ನು ಕಟ್ಟಿಕೊಂಡರು. ನಿವೃತ್ತಿಯ ತರುವಾಯ ಪುಸ್ತಕ ಮಾರಾಟ ಮಾಡುವ ಸಾಹಿತ್ಯ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಲೇ ಚುಟುಕು ಬರಹ, ಹೋರಾಟ ಮತ್ತು ಪ್ರಗತಿಪರ ಚಿಂತನೆಗಳ ಪ್ರಸರಣದಲ್ಲಿ ತೊಡಗಿಸಿಕೊಂಡವರು. ಈ ಕೃತಿಯೂ ಇವರ ಆತ್ಮ ಕಥೆಯಾಗಿದೆ.
©2023 Book Brahma Private Limited.