ಗಿರಿಜವ್ವನ ಮಗ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 258

₹ 220.00




Year of Publication: 2020
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬಾಲ್ಯದ ಸ್ಮೃತಿಗಳನ್ನು ಒಳಗೊಂಡಿರುವ ‘ಗಿರಿಜವ್ವನ ಮಗ’ ಬಹುಮುಖ್ಯ ಸಾಂಸ್ಕೃತಿಕ-ಸಾಹಿತ್ಯಕ ಕೃತಿ. ಪಟ್ಟಣಶೆಟ್ಟರ ಬರಲಿರುವ ಆತ್ಮಕಥನದ ಪೂರ್ವಾರ್ಧವಾಗಿರುವ ಈ ಗ್ರಂಥವು ಕೇವಲ ಲೇಖಕರ ನೆನಪುಗಳಿಗೆ-ಅನುಭವಕ್ಕೆ ಸೀಮಿತವಾಗಿಲ್ಲ. ಅದು ಅನುಭವದ ಅನಾವರಣದ ಜೊತೆಯಲ್ಲಿಯೇ ಒಂದು ಕಾಲ ಘಟ್ಟದ ಬದುಕು- ಜನಜೀವನ, ವಸ್ತು-ವಿಷಯಗಳನ್ನು ವಿಭಿನ್ನ –ವಿಶಿಷ್ಟ ರೀತಿಯಲ್ಲಿ ದಾಖಲಿಸುತ್ತದೆ.

ಅವ್ವ ಗಿರಿಜವ್ವನ ಕುರಿತಾದ ಪ್ರೀತಿ- ಆರ್ದ್ರತೆ, ಕಾಳಜಿಗಳು ಸಹಜವಾಗಿ ಮೂಡಿಬಂದಿವೆ. ಮೇಲ್ನೋಟಕ್ಕೆ ಅವ್ವನನ್ನು ಕೇಂದ್ರವಾಗಿಟ್ಟು ಮಗನ ಬದುಕನ್ನು ಅನಾವರಣ ಮಾಡುವಂತೆ ಕಾಣಿಸುತ್ತದೆ. ಆದರೆ, ಅದು ಕೇವಲ ಅಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದೇ ಈ ಪುಸ್ತಕದ ವಿಶೇಷ. ಗ್ರಾಮೀಣ ಪ್ರದೇಶದ ಒಂದು ಕಾಲಮಾನದ ಸಾಂಸ್ಕೃತಿಕ ದಾಖಲೆ ಆಗಿರುವ ಗ್ರಂಥದಲ್ಲಿ ಪ್ರಸ್ತಾಪಿತ ಘಟನೆಗಳು-ವಿವರಗಳು ಮೆಲುಕು ಹಾಕುವಂತಿವೆ. ಬಾಲ್ಯದ ದಿನಗಳ ತೀಕ್ಷ್ಣ ಗ್ರಹಿಕೆಯು ಅಷ್ಟೇ ತಾಜಾ ಆಗಿ ಅಕ್ಷರಕ್ಕೆ ಇಳಿದು ಬಂದಿದೆ. ಉತ್ತರ ಕರ್ನಾಟಕದ ಸಹಜ ಲಯದ ಸೊಗಸು ಓದುಗರ ಅಂತರಂಗವನ್ನು ಮುಟ್ಟುವಂತಿದೆ.

ದೇಸಿ ಭಾಷೆಯ ನುಡಿಗಟ್ಟು- ಗ್ರಾಮೀಣ ಜೀವನ ಶೈಲಿಯನ್ನು ಬಿಂಬಿಸುವಲ್ಲಿ ಯಶ ಕಂಡಿದೆ. ಅಪರೂಪದ ಪದಗಳ ಬಳಕೆಯ ಪ್ರಯತ್ನ ಗಮನ ಸೆಳೆಯುವಂತಿದೆ. ಸರಳವಾಗಿ-ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆಯು ಓದುಗರನ್ನು ಪಟ್ಟಣಶೆಟ್ಟರ ಬಾಲ್ಯದ ಲೋಕಕ್ಕೆ ಕರೆದೊಯ್ಯತ್ತದೆ. ನೆನಪ ಗಂಧರ್ವರು ಪದಗಳ ಲಾಸ್ಯದಲಿ ಮಿಂದು ಎದ್ದಂತೆ ಭಾಸವಾಗುತ್ತದೆ. ಈ ಕೃತಿಯನ್ನು 2018ರಲ್ಲಿ ಗದಗಿನ ಜಗದ್ಗುರು ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡಿದ್ದು, ಸದ್ಯದ ಈ ಕೃತಿಯು ಎರಡನೇ ಆವೃತ್ತಿ.

 

 

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Conversation

Related Books