ನಡು ಬಗ್ಗಿಸದ ಎದೆಯ ದನಿ

Author : ನವೀನ್ ಸೂರಿಂಜೆ

Pages 200

₹ 200.00




Year of Publication: 2024
Published by: ಲಡಾಯಿ ಪ್ರಕಾಶನ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

‘ನಡು ಬಗ್ಗಿಸದ ಎದೆಯ ದನಿ’ ಹಿಂದೂತ್ವವಾದಿಯ ಒಳಹೊರಗಿನ ಅನುಭವ ಕಥನ ಕೃತಿಯನ್ನು ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಅವರು ನಿರೂಪಿಸಿದ್ದಾರೆ. ಈ ಕೃತಿಗೆ ಡಾ.ಡೋಮಿನಿಕ್ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಈ ಬರಹವು, ಯುವಜನತೆಯ ನಡುವೆ ಹೊಸ ಸಂಚಲನವನ್ನು ಆರಂಭಿಸಿದ ಮಹೇಂದ್ರಕುಮಾರವರ ಬದಕನ್ನು ಕುರಿತದ್ದು. ಅವರ ಮಾತುಗಳೇ ಈ ಬರಹಕ್ಕೆ ಮುನ್ನುಡಿಯಂತ್ತಿವೆ – “ಇದು ನನ್ನೊಬ್ಬನ ಆತ್ಮಕತೆಯಲ್ಲ. ಕೋಮುವಾದದ ಅಮಲೇರಿಸಿಕೊಂಡು ಸತ್ತ ಮತ್ತು ನಿತ್ಯ ಸಾಯುತ್ತಿರುವ ಬಡ ಹಿಂದುಳಿದ ವರ್ಗಗಳ ಯುವಕರೆಲ್ಲರ ಆತ್ಮಕತೆ”. ಇಂತಹ ಒಳನೋಟ ಅಷ್ಟು ಸಲೀಸಾಗಿ ಸಿಗುವಂತಹದ್ದಲ್ಲ. ಬದುಕಿಗೆ ತನ್ನನ್ನು ತಾನೆ ಒಡ್ಡಿಕೊಂಡು, ಆ ಸವಾಲುಗಳಿಂದ ಕಂಡುಕೊಂಡಿರುವ ಹೊಸ ಒಳನೋಟವಾಗಿದೆ. ಅಂತಹ ಸವಾಲುಗಳು ಬಹುಜನಕ್ಕೆ ಉಂಟುಮಾಡುತ್ತಿರುವ ಹಿಂಸೆಯನ್ನು ಬಗೆಹರಿಸಿಕೊಳ್ಳಲು, ಕಕ್ಕುಲಾತಿಯಿಂದ ಮತ್ತಷ್ಟು ಮಾರ್ಗೋಪಾಯಗಳನ್ನು ಅನುಸರಿಸಿದ್ದರಿಂದ ಆ ನೋಟ ದೊರೆತಿದೆ ಎಂದಿದ್ದಾರೆ ಡಾ. ಡೋಮಿನಿಕ್.

About the Author

ನವೀನ್ ಸೂರಿಂಜೆ

ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಮೂಲತಃ ದಕ್ಷಿಣ ಕನ್ನಡದವರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಷಾ ಕಿರಣ, ಕರಾವಳಿ ಅಲೆ, ಕಸ್ತೂರಿ ನ್ಯೂಸ್ 24@7 ನಲ್ಲಿ ಕೆಲಸ ಮಾಡುತ್ತ. ನಂತರ ಬೆಂಗಳೂರಿಗೆ ಬಂದ ನವೀನ್ ಸೂರಿಂಜೆ ಸಧ್ಯ ಬಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷಾಕಿರಣ ಮತ್ತು ಕರಾವಳಿ ಅಲೆ ಪತ್ರಿಕೆಯ ಸುರತ್ಕಲ್ ವಿಭಾಗದ ಬಿಡಿ ವರದಿಗಾರರಾಗಿ ಕೆಲಸ ಮಾಡಿರುವ ನವೀನ್ ಪರಿಸರ ಪರವಾದ ಸುದ್ದಿಗಳು, ಮಾನವತೆಯ ವಿರುದ್ಧದ ನಿಲುವುಗಳಿರೋ ಸಂಘಟನೆಗಳ ವಿರುದ್ಧದ ಸುದ್ದಿಗಳ ಮೂಲಕ ಸುದ್ದಿಯಾದರು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್‍ನಲ್ಲಿ ನಡೆದ ಕೋಮುಗಲಭೆಗಳ ಸಚಿತ್ರ ವರದಿ ಮಾಡಿದರು. ...

READ MORE

Related Books