ಬೊಪ್ಪ ನನ್ನನ್ನು ಕ್ಷಮಿಸು

Author : ಉದಯ್ ಕುಮಾರ್ ಹಬ್ಬು

Pages 340

₹ 300.00




Year of Publication: 2020
Published by: ಅಪರಂಜಿ ಪ್ರಕಾಶನ
Address: ‘ನಿರುತ್ತರ’, #ಬಿ-155, 2ನೇ ಕ್ರಾಸ್, 3ನೇ ಹಂತ, ಕಲ್ಯಾಣನಗರ, ಚಿಕ್ಕಮಗಳೂರು- 577102
Phone: 9844767859

Synopsys

‘ಬೊಪ್ಪ ನನ್ನನ್ನು ಕ್ಷಮಿಸು’ ಲೇಖಕ ಉದಯಕುಮಾರ್ ಹಬ್ಬು ಅವರ ಆತ್ಮಚರಿತ್ರೆ. ಈ ಕೃತಿಗೆ ಲೇಖಕ ಡಾ.ಬಿ. ಜನಾರ್ದನ ಭಟ್ ಬೆನ್ನುಡಿ ಬರೆದಿದ್ದಾರೆ. ‘ಉಡುಪಿ ಜಿಲ್ಲೆಯ ಮುಂಡ್ಕೊರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿ, ನಿವೃತ್ತರಾಗಿ ಈಗ ದ.ಕ.ದ ಕಿನ್ನಿಗೋಳಿಯಲ್ಲಿ ನೆಲೆಸಿರುವ ಸಾಹಿತಿ ಉದಯಕುಮಾರ್ ಹಬ್ಬು ಅವರ ಬಾಲ್ಯಕಾಲ ಕಥನ ‘ಬೊಪ್ಪ ನನ್ನನ್ನು ಕ್ಷಮಿಸು’ ಒಂದು ಅಪರೂಪದ ಕೃತಿ ಎನ್ನುತ್ತಾರೆ ಡಾ. ಜನಾರ್ದನ ಭಟ್. ಉದಯಕುಮಾರ್ ಹಬ್ಬು ಅವರು ಏಳನೆಯ ತರಗತಿಯವರೆಗೆ ಬಾಲ್ಯವನ್ನು ಕಳೆದದ್ದು ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ. ಅವರ ಅಪ್ಪ ನಿವೃತ್ತ ಶಾನುಭೋಗರಾಗಿದ್ದರು. ಗಾಂಧೀವಾದಿಯಾಗಿದ್ದು ಅಡ್ಡದಾರಿಯಲ್ಲಿ ಆಸ್ತಿಪಾಸ್ತಿ ಮಾಡದೆ ಬಾಡಿಗೆ ಮನೆಯಲ್ಲಿಯೇ ಬದುಕು ಕಳೆದವರು. ಈ ಆತ್ಮಕಥನವು ಪ್ರಚ್ಛನ್ನವಾಗಿ ಅವರ ಬದುಕಿನ ವ್ಯಾಖ್ಯಾನವಾಗಬಾರದು ಎಂಬ ಗೌರವದಿಂದ ಹಬ್ಬು ಅವರು ಈ ಶೀರ್ಷಿಕೆಯನ್ನಿರಿಸಿದ್ದಾರೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books