ಕವಿ-ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಆತ್ಮಕಥನ ಕೃತಿ-ಎಚ್ಚೆಸ್ವಿ ಅನಾತ್ಮ ಕಥನ. ಅವರ ಆತ್ಮಕಥನಕ್ಕೊಂದು ಹೊಸ ರೂಪು ನೀಡಲಾಗಿದೆ ಎಂದು ಕೃತಿಯ ಉಪಶೀರ್ಷಿಕೆ ಹೇಳುತ್ತದೆ. ಕವಿಯಾಗಿ, ಸಾಹಿತಿಯಾಗಿ, ಅಂಕಣಕಾರರಾಗಿ, ನಾಟಕ ರಚನೆಕಾರರಾಗಿ ಹೀಗೆ ಹತ್ತು ಹಲವು ವಲಯಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರ ಆತ್ಮಕಥನ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಚಿಂತನೆಗಳಿಂದ ಕೃತಿಯು ಓದುಗರ ಗಮನ ಸೆಳೆಯುತ್ತದೆ.
©2023 Book Brahma Private Limited.