ರಂಗವನದ 'ಚಂದ್ರ'ತಾರೆ

Author : ಮುಖ್ಯಮಂತ್ರಿ ಚಂದ್ರು

₹ 250.00




Year of Publication: 2022
Published by: ಕವಿತಾ ಪ್ರಕಾಶನ
Address: ಮೈಸೂರು

Synopsys

ಮುಖ್ಯಮಂತ್ರಿ ಚಂದ್ರು ಅವರ ರಂಗಭೂಮಿ, ಹಿರಿತೆರೆ, ಕಿರುತೆರೆ, ರಾಜಕಾರಣ ಬದುಕಿನ ಚಿತ್ರಣ ರಂಗವನದ 'ಚಂದ್ರ'ತಾರೆ. ಕೃತಿಯ ಬೆನ್ನುಡಿಯಲ್ಲಿ ಬಿ.ವಿ. ರಾಜಾರಂ ಅವರ ಮಾತುಗಳಿದ್ದು, 'ಮುಖ್ಯಮಂತ್ರಿ' ನಾಟಕದ 800ಕ್ಕೂ ಅಧಿಕ ಪ್ರದರ್ಶನಗಳ ಜೊತೆಗೆ ಕಲಾಗಂಗೋತ್ರಿ ತಂಡ ಹಾಗೂ ಎಲ್ಲ ಗೆಳೆಯರೊಂದಿಗೆ ಖುಷಿಯಾಗಿ 70 ವರ್ಷಗಳನ್ನು ಕೂಡಿಸಿಕೊಂಡಿದ್ದಾರೆ. ಆರೋಗ್ಯದ ಏರಿಳಿತ, ಅಡಿಗಡಿಗೂ ಬಂದ ಅಡೆತಡೆಗಳಿಗೆ ಮನಸ್ಸು ಕೆಡಿಸಿಕೊಳ್ಳದೆ, ನಗುನಗುತ್ತಲೆ ಜೀವನದ ದೋಣಿಯಲ್ಲಿ ಪಯಣಿಸಿದ್ದಾರೆ. ಸರಳ ಜೀವನ, ಹಾಸ್ಯಬೆರೆತ ಮಾತು, ಎಲ್ಲ ಕ್ಷೇತ್ರಗಳಲ್ಲೂ ನಿರಂತರ ಒಡನಾಟ... ಹೀಗೆ ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ ಅದೃಷ್ಟದ ರೇಖೆಯೊಡನೆ ನಡೆದು ಭವಿಷ್ಯಕ್ಕೆ ಜಿಗಿದು ಡಾ.ಮುಖ್ಯಮಂತ್ರಿ ಚಂದ್ರು ಆದರು. ಈ ಕೃತಿ ಅವರ ಜೀವನ ಪಯಣದ ಯೋಗ-ಯೋಗ್ಯತೆಯ, ಸಾಧನೆ-ಸಿದ್ಧಿಯನ್ನು ಅವರದೇ ಹಾಸ್ಯಮಿಶ್ರಿತ ಭಾಷೆಯಲ್ಲಿ ಕಂಡಿರಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.

About the Author

ಮುಖ್ಯಮಂತ್ರಿ ಚಂದ್ರು
(28 August 1953)

ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಮಾಜಿ ಅಧ್ಯಕ್ಷರು. ಹಂಪಿಯ ಕನ್ನಡ ವಿ.ವಿ, ಕುಲಪತಿ ಡಾ. ಎ. ಮುರಿಗೆಪ್ಪ ಅವರೊಂದಿಗೆ ಮುಖ್ಯಮಂತ್ರಿ ಚಂದ್ರು ಅವರು ‘ಆಡಳಿತ ಕನ್ನಡ ಎಂಬ ಸಂಪುಟ ರಚಿಸಿದ್ದಾರೆ.  ಇವರು ಮೂಲತಃ ಬೆಂಗಳೂರು ಬಳಿಯ ನೆಲಮಂಗಲ ತಾಲೂಕಿನ ಹೊನ್ನಸಂದ್ರದವರು.  ಹುಟ್ಟಿದ್ದು 1953ರ ಆ. 28 ರಂದು. ತಂದೆ ಎನ್.ನರಸಿಂಹಯ್ಯ,ತಾಯಿ ತಿಮ್ಮಮ್ಮ.. ಚಂದ್ರು ಮೂಲ ಹೆಸರು ಚಂದ್ರಶೇಖರ್.ತುಮಕೂರಿನ ಸಿದ್ಧಗಂಗಾ ಮಠದ ಶಾಲೆಯಲ್ಲಿ ವಿದ್ಯಾಭ್ಯಾಸ ಹಾಗೂ ಬಿ.ಎಸ್.ಸಿ ಪೂರ್ಣಗೊಳಿಸಿದರು.  ಬೆಂಗಳೂರು ವಿ.ವಿ. ಉದ್ಯೋಗಯಾಗಿದ್ದರು. ಹುತ್ತವ ಬಡಿದರೆ ನಾಟಕದ ಪಾತ್ರಧಾರಿ ಬರಲಿಲ್ಲದ ಕಾರಣ ನಿರ್ದೇಶಕ ಪ್ರಸನ್ನ ಅವರು ಮುಖ್ಯಮಂತ್ರಿ ಚಂದ್ರುವಿಗೆ ...

READ MORE

Related Books