ಚಿತ್ರದುರ್ಗ ಜಿಲ್ಲೆಯ ಜನಪದ ಕಥೆಗಾರರಲ್ಲಿ ಖ್ಯಾತರಾದ ಈರಬಡಪ್ಪನವರ ಕಥನ ಸಂಪತ್ತು ಆತ್ಮಕಥಾ ರೂಪದಲ್ಲಿ ಲೇಖಕ ಮಲ್ಲಿಕಾರ್ಜುನ ಕಲಮರಹಳ್ಳಿ ಯವರು ವಿವರಿಸಿದ್ದಾರೆ. ಈರಬಡಪ್ಪನವರ ಧ್ವನಿಯಲ್ಲೇ, ಅವರ ಗ್ರಾಮೀಣ ಜನಪದ ಸೊಗಡಿನಲ್ಲಿ ಅವರ ಜೀವನ ಕಥೆ ಮತ್ತು ಅವರು ಹೇಳುವ ಕೆಲವು ಪ್ರಾತಿನಿಧಿಕ ಕತೆಗಳು ಓದುಗರಿಗೆ ಹೊಸತರದ ಓದನ್ನು ಪರಿಚಯಿಸುತ್ತದೆ. ಜನಪದ ಕಥಾ ಸರಣಿಯನ್ನು ಎಲ್ಲೂ ಹೆಚ್ಚು ಭಂಗಗೊಳಿಸಲು ಇಷ್ಟಪಡದೆ ಕೇವಲ ನಿರೂಪಣಾ ಕಾರ್ಯವನ್ನು ಮಾತ್ರವೇ ಅಚ್ಚುಕಟ್ಟಾಗಿ ನಿಭಾಯಿಸಿ ಕೃತಿಗೆ ಜೀವಂತಿಕೆಯನ್ನು ಲೇಖಕರು ತಂದುಕೊಟ್ಟಿದ್ದಾರೆ.
©2025 Book Brahma Private Limited.