ಎಲ್ಲ ನೆನಪಾಗುತಿದೆ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 392

₹ 350.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 0040
Phone: 080 - 26617100 / 26617755

Synopsys

ಎಲ್ಲ ನೆನಪಾಗುತ್ತಿದೆ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಆತ್ಮಕಥನ. ಈ ಕೃತಿಯ ಬಗ್ಗೆ ಬರೆಯುತ್ತಾ...ಅನಾತ್ಮ ಕಥನದ ಮೂಲಕವೇ “ಆತ್ಮ ಕಥನ ಎನ್ನುವುದನ್ನು ಲಕನ್ ನಂಥ ಮನೋವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಲೇಖಕ ಜಿ.ಎಸ್.ಆಮೂರ. ಜಗತ್ತು ಒಂದು ಕನ್ನಡಿ ಇದ್ದ ಹಾಗೆ- ಅದೊಂದು 'ಮಾಯಾ' ಕನ್ನಡಿ ಎಂದು ನಂಬಿದವರೂ ಉಂಟು. ಆದರೆ ಈ ಕನ್ನಡಿಯಲ್ಲಿ ನೋಡಿದಾಗ ಮಾತ್ರ ನಮ್ಮ ಮುಖ ಪರಿಚಯವಾಗುತ್ತದೆ. ಮನುಷ್ಯನ ಏಕಾಂತ ಜೀವನದ-ಸ್ಕೃತಿ, ಕಲ್ಪನೆ, ಧ್ಯಾನ, ಶ್ರೀಮಂತಿಕೆಯೂ ಕೂಡ ಹೊರಜಗತನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ. ಹೀಗಾಗಿ ಎಚೈಸಿಯವರ ಎರಡೂ ಅನಾತ್ಮಕಥನಗಳು ಮೆಚ್ಚುಗೆ ಗಳಿಸುತ್ತವೆ. ಆತ್ಮಕಥನದ ಮೂಲಕ ಒಬ್ಬ ಲೇಖಕ ತನ್ನ ಬದುಕು - ವ್ಯಕ್ತಿತ್ವಗಳ ಅರ್ಥ, ಸೂತ್ರ, ಅನನ್ಯತೆಗಳನ್ನು ಶೋಧಿಸ ಹೊರಟಾಗ ಅವನಿಗೆ ಈ ಶೋಧದ ಹೊರಗಿನ ಅನುಭವ ಪ್ರಸ್ತುತವಾಗದಿರುವುದರಿಂದ ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಎಚ್ಚೆಸ್ವಿ ಅವರ ಅನಾತ್ಮಕಥನಗಳು ಈ ಅಪಾಯದಿಂದ ಪಾರಾಗಿವೆ.

ಹೀಗಾಗಿ ಅವುಗಳಲ್ಲಿ ಲೇಖಕನ ವ್ಯಕ್ತಿತ್ವ ಅನಿವಾರ್ಯವಾಗಿ ಮೂಡಿಬರುವುದಲ್ಲದೆ ಶಿವರಾಮ ಕಾರಂತರ “ಹಳ್ಳಿಯ ಹತ್ತು ಸಮಸ್ತರು' , ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ “ನಮ್ಮೂರ ರಸಿಕರು - ಮೊದಲಾದ ಕಥನಗಳಲ್ಲಿ ಇದ್ದಂತೆ ಬಾಹ್ಯ ಜಗತ್ತೂ ಪ್ರತಿಫಲಿತವಾಗುತ್ತದೆ. ಬದುಕನ್ನು ಒಂದು ವಿಸ್ಮಯವಾಗಿ ನೋಡುವ -ವೈಎನೈ ಭಾಷೆಯಲ್ಲಿ- ವಂಡರ್ ದೃಷ್ಟಿಯಿದ್ದಾಗ ಮಾತ್ರ ಇದು ಸಾಧ್ಯ. ಕಾವ್ಯದಲ್ಲಿದ್ದಂತೆ ಗದ್ಯದಲ್ಲೂ- ಕಾವ್ಯ ಗದ್ಯದ ಈ ಭೇದ ಅಷ್ಟು ಅವಶ್ಯವೇ?- ಎಚ್ಚೆಸ್ವಿ ಸತತವಾಗಿ ಪ್ರಯೋಗಶೀಲರಾಗಿರುವುದು ಸಂತಸದ ವಿಷಯ ಎನ್ನುತ್ತಾರೆ ಜಿ.ಎಸ್. ಆಮೂರ. 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books