ನನ್ನ ಕೆಲವು ಮಿತ್ರರು ನನ್ನ ಆತ್ಮಕಥೆಯ ಪುಸ್ತಕ ಬರೆಯುತ್ತಿರುವಾಗ, 'ಪೆಥೋಲಜಿ ವಿಷಯದಲ್ಲಿ ಯಾಕೆ ಪುಸ್ತಕ ಬರೆಯುವುದಿಲ್ಲ?' ಎಂದು ಕೇಳಿದರು. ಆ ವಿಷಯದಲ್ಲಿ 26 ವರ್ಷಗಳ ಅನುಭವದಿಂದ ನಾನು ನಿಷ್ಣಾತನಾಗಿದ್ದೇನೆಂದು ಅವರು ತಿಳಿದಿದ್ದರು. ಆದರೆ ವಾಸ್ತವಿಕವಾಗಿ ನಾನು ಪರಿಣಿತನಾಗಿರಲಿಲ್ಲ. ಏಕೆಂದರೆ ವಿಜ್ಞಾನವು ದಿನೇ ದಿನೇ ವೃದ್ಧಿಯಾಗುತ್ತಾ ಇರುತ್ತದೆ. ಅದು ನಿಂತ ನೀರಲ್ಲ. ಮಸ್ತಕ ಬರೆದು ಪೂರ್ಣವಾಗುವಷ್ಟರಲ್ಲಿ ಅನೇಕ ನವೀನ ಶೋಧನೆಗಳು ಆಗಿರುತ್ತವೆ. ಆದ್ದರಿಂದ ಪುಸ್ತಕದ ಜ್ಞಾನ ಹಳೆಯದಾಗುತ್ತದೆ. ಆದರೆ ನನ್ನ ಜನ್ಮಾಂತರದಲ್ಲಿ ಅದ ಅನುಭವ ಎಂದಿಗೂ ಹೊಸದಾಗಿರುತ್ತದೆ. ಆ ವಿಚಿತ್ರ ಘಟನೆಗಳು ನೆನಪಾದಾಗ ಕಲಿಯುಗದಲ್ಲಿಯೂ ಪರಮಾತ್ಮನ ಅಸ್ತಿತ್ವದ ಭಾವನೆ ಹೃದಯದಲ್ಲಿ ಮೂಡುತ್ತದೆ. ಪ್ರಥಮಬಾರಿಗೆ ನನ್ನ ಆತ್ಮಕತೆಯನ್ನು 1908ನೇ ಇಸವಿಯಲ್ಲಿ ಇಂಗ್ಲೀಷ್ನಲ್ಲಿ ಬರೆದಾಗ ಇದರ ಶ್ಲಾಘನೆ ಇಡೀ ಭಾರತದಲ್ಲಿ ಆಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಈ ಏಳು ವರ್ಷಗಳಲ್ಲಿ ಎರಡು ಬಾರಿ ಇಂಗ್ಲೀಷಿನಲ್ಲಿ ಒಂದು ಸಲ ಗುಜರಾತಿ ಭಾಷೆಯಲ್ಲಿ ಮತ್ತು ಈಗ ಕನ್ನಡ ಭಾಷೆಯಲ್ಲಿಯೂ ಪ್ರಕಟವಾಗಬಹುದು ಎಂಬುದು ನಿಜಕ್ಕೂ ಕಲ್ಪನಾತೀತ ಎಂದು ದಿವಾಕರ ಹೆಂಜಾಲ ಪುಸ್ತಕದ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.