ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಆತ್ಮಕಥೆ-ಸಂಕ್ರಾಂತಿ. ಸಾಹಿತಿ ಡಾ. ದೇ.ಜ.ಗೌ ಬೆನ್ನುಡಿ ಬರೆದು ‘ಸಂಕ್ರಾಂತಿ-ಆತ್ಮಕಥೆ, ಹಳ್ಳಿಯ ಮಕ್ಕಳೆಲ್ಲರೂ ಓದಬೇಕಾದ ಗ್ರಂಥ. ಅಜ್ಞಾನ ತುಂಬಿತುಳುಕುತ್ತಿದ್ದ ಸಮಾಜದಲ್ಲಿ ನಿರಕ್ಷರಕುಕ್ಷಿಗಳ ಉದರದಲ್ಲಿ ಹುಟ್ಟಿ, ದನಕುರಿಗಳ ಕೊಟ್ಟಿಗೆಯಲ್ಲಿ ಬೆಳೆದು, ಬಡತನದ ಬೇಗೆಯಲ್ಲಿ ಬೇಯುತ್ತಾ, ನಾಗರಿಕ ಸಮಾಜ ಸೈ ಎನ್ನುವಂತೆ ಮೇಲೇರಿದ್ದೇ ಆಶ್ಚರ್ಯದ ಸಂಗತಿ. ಹಳ್ಳಿಯ ಹೈದನೊಬ್ಬ ನಟನಾಗಿ, ನಿರ್ದೇಶಕನಾಗಿ, ಸಂಪಾದಕರಾಗಿ, ಹಲವು ಸಂಸ್ಥೆಗಳ ಸಂಘಟಕರಾಗಿ, ನಾಟಕ, ಅಭಿನಯ, ಕಾದಂಬರಿಕಾರರಾಗಿ, ಕತೆಗಾರರಾಗಿ, ಪುಸ್ತಕ ಪ್ರಕಾಶಕರಾಗಿ ಕಲೆಯ ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದು ವಿಸ್ಮಯದ ಸಂಗತಿ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.