ಯದುಪತಿ

Author : ಸಾಲಿ ರಾಮಚಂದ್ರರಾಯ

Pages 151

₹ 1.00




Year of Publication: 1952
Published by: ಕರ್ನಾಟಕ ಪ್ರಾಗತಿಕ ಶಿಕ್ಷಣ ಸಂಸ್ಥೆ
Address: ಮುಂಬೈ

Synopsys

ಸಾಲಿ ರಾಮಚಂದ್ರರಾಯರು ಬರೆದ ಕೃತಿ-ಯುದುಪತಿ (ಆತ್ಮವಿಕಾಸ). ಇದು ಅವರ ಆತ್ಮಚರಿತ್ರೆ. ಕೃತಿಗೆ ಮುನ್ನುಡಿ ಬರೆದ ರಂಗಾಚಾರ್ಯ ಜಾಗೀರದಾರ್ ಅವರು ‘ಆತ್ಮಚರಿತ್ರೆಯಲ್ಲಿ ಬರೆದ ಅನುಭವಗಳು, ಭಾವನೆಗಳು, ಧ್ಯೇಯಗಳು ಪ್ರಾಮಾಣಿಕವಾಗಿವೆ. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದು ಕೊಂಡಿದ್ದರು. ಆದರೆ, ಸದ್ಗುಣಗಳನ್ನು ರೂಢಿಸಿಕೊಂಡಿದ್ದ ಅವರಿಗೆ ಈ ಸದ್ಗುಣಗಳೇ ಜೀವನದ ದಾರಿಯಲ್ಲಿ ಮುನ್ನಡೆಸಿದವು. ಇದು ಅವರ ವ್ಯಕ್ತಿತ್ವದ ಹೆಗ್ಗಳಿಕೆ’ ಎಂದು ಪ್ರಶಂಸಿಸಿದ್ದಾರೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books