ನೆನಪು ಕೆದರಿದಾಗ

Author : ಪ್ರಣತಾರ್ತಿಹರನ್

Pages 202

₹ 50.00




Year of Publication: 1998
Published by: ಭಾರತೀ ಪ್ರಕಾಶನ
Address: ಮೈಸೂರು

Synopsys

ಮೇಜರ್ ಎಚ್.ಸಿ. ವೇಣುಗೋಪಾಲ್ ಸ್ವಾತಂತ್ರ್ಯ ಹೋರಾಟಗಾರರಾಗಿ ಅಸಾಧಾರಣ ಸಾಹಸಗಳನ್ನು ಮಾಡಿದರು, ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಭಾರತೀಯ ಸೇನೆಯ ಕಮಿಷನ್ಡ್ ಅಧಿಕಾರಿಯಾಗಿ ನಂತರ ಮೇಜರ್ ಪದವಿಗೆ ಏರಿದರು. ಅವರಿಗೆ 1973ರಲ್ಲಿ ಭಾರತ ಸರ್ಕಾರ ವಿಶಿಷ್ಟ ಸೇವಾಪದಕವನ್ನು ನೀಡಿ ಗೌರವಿಸಿತು. ಆ ಗೌರವ ಸಂದುದು ಅವರ ಯುದ್ಧಸಾಹಸಕ್ಕಿಂತ ಹೆಚ್ಚಾಗಿ ಸೇವಾ ಕಾರ್ಯಗಳಿಗೆ; ಆ ಮೂಲಕ ಸೈನಿಕರ ಬಗೆಗೆ ಇದ್ದ ದೊಡ್ಡ ಕೊರತೆಯೊಂದನ್ನು ನೀಗಿಸಿದ್ದಕ್ಕೆ. ಅವರು ತಮ್ಮ ಅನುಭವಗಳನ್ನು ಪ್ರಾಮಾಣಿಕವಾಗಿ ಸರಳವಾಗಿ ನೇರವಾಗಿ ಅಭಿವ್ಯಕ್ತಿಸಿದ್ದು ಇದೊಂದು ರಸವತ್ತಾದ ಸೈನಿಕನ ಆತ್ಮಕಥೆಯಂತಿದೆ. ಇಂಗ್ಲಿಷ್ ಮೂಲದ ಇದನ್ನು ಕನ್ನಡಕ್ಕೆ ಆರ್.ಎಲ್. ಅನಂತರಾಮಯ್ಯ ಅವರು ಅನುವಾದಿಸಿದ್ದರು ಲೇಖಕ ಪ್ರಣತಾರ್ತಿಹರನ್ ಸಂಪಾದಿಸಿದ್ದಾರೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books