ಮನುಷ್ಯನಿಗೆ ಕನಸುಗಳು ಬೇಕು. ಆದರೆ, ಕನಸು ಕಾಣುವುದೇ ಹುಚ್ಚುತನದ ಲಕ್ಷಣ. ಕನಸು ನನಸಾದಾಗ ಉಬ್ಬುವುದಿಲ್ಲ. ಕನಸು ಮುಗ್ಗರಿಸಿದಾಗ ಕುಗ್ಗುವುದಿಲ್ಲ. ಆದರೂ ಕನಸುಗಳನ್ನು ಕಾಣುತ್ತಲೇ ಮನುಷ್ಯ ತನ್ನ ಜೀವನಾದರ್ಶವನ್ನು ಕಂಡುಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಯತ್ನಿಸಬೇಕು. ಇಂತಹ ಕನಸುಗಳ ಸವಾರಿ ಮಾಡುವವನು ಧೀರನಿರಬೇಕು. ಶೂರನಿರಬೇಕು. ಪ್ರಯತ್ನಶೀಲನಾಗಿರಬೇಕು. ತಾಳ್ಮೆಯಿಂದ ಜೀವನ ಪ್ರೀತಿ ಹೊಂದಿರಬೇಕು ಎಂಬ ಮೂಲ ಆಶಯದೊಂದಿಗೆ ಆತ್ಮ ಚರಿತ್ರೆಯನ್ನುಲೇಖಕ ಸಂಗಮೇಶ ತಮ್ಮನಗೌಡ್ರ ಬರೆದಿದ್ದಾರೆ.
ಮೊದಲ ಬಾರಿಗೆ ಮದ್ರಾಸಿಗೆ ಹೋದಾಗ, ಅಕ್ಕಲಕೋಟೆಯ ಆ ಬಿಸಿಲ ನೆನಪು, ಮಧುರೈನಲ್ಲಿ ಕಳೆದ ಆ ದಿನಗಳು, ಮೋಹಕ ನಗರಿ ಮುಂಬೈನಲ್ಲಿ ಕಂಡ ಕೆಲ ಅನುಭವಗಳು, ಒಂಟಿಗಾಲ ಮೇಲೆ ವಿಶ್ವವಿದ್ಯಾಲಯದಲ್ಲಿ ನಿಂತಾಗ, ಪಿಎಚ್ ಡಿ ಮಹಾಪ್ರಬಂಧಧ ಸಂದರ್ಶನದ ಆ ಕ್ಷಣ ಹೀಗೆ ತಮ್ಮ ಬದುಕಿನ ಅಮೂಲ್ಯ ಕ್ಷಣಗಳಿಗೆ ಸ್ಪಂದಿಸುತ್ತಾ ಈ ಆತ್ಮಚರಿತ್ರೆಯು ಓದುಗರನ್ನು ತನ್ನತ್ತಾ ಸೆಳೆಯುತ್ತದೆ.
©2022 Book Brahma Private Limited.