ನಾನೆಂಬುದು ನಾನಲ್ಲ

Author : ಸಣ್ಣರಾಮ

Pages 192

₹ 175.00




Year of Publication: 2019
Published by: ಅಹರ್ನಿಶಿ ಪ್ರಕಾಶನ
Address: ಕಂಟ್ರಿ ಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ-577203
Phone: 9449174662

Synopsys

ಈ ಕೃತಿಯು ಶಿರೋನಾಮೆಯಿಂದ ಸಣ್ಣರಾಮ ಅವರ ಆತ್ಮ ಚರಿತ್ರೆ ಎಂದರೂ ಕೃತಿಯ ಒಳಗೊಂದು ಸಮುದಾಯದ ಕತೆ ತೆರೆದುಕೊಳ್ಳುತ್ತದೆ. ಆಧುನಿಕ ಸಮಾಜ ವಿಧದ ಒತ್ತಡವನ್ನು ಲೇಖಕರು ಎದುರಿಸಿದ, ಸಂಸ್ಕೃತಿಯ ವಿಭಜನೆಯ ಕುರಿತು, ಒಂಟಿತನ ನೀಗಲು ಹೊಸದಾದ ತೀವ್ರತೆಯ ಹುಡುಕಾಟವನ್ನು, ತಮ್ಮ ನಿತ್ಯ ಬದುಕಿನ ಜಂಜಡ, ಖಿನ್ನತೆ ಆಂದೋಲನವನ್ನು ಪ್ರಥಮ ವಾಚಕದಲ್ಲಿ ನಿರೂಪಿಸಿದ್ದಾರೆ. ಇತ್ತ ಪೂರ್ಣ ನಾಗರಿಕರೂ ಅಲ್ಲದೆ ಅತ್ತ ಪೂರ್ಣ ಅಲೆಮಾರಿಗಳೂ ಅಲ್ಲದೆ ಲಂಬಾಣಿಗಳ ಬದುಕಿನ ವಾಸ್ತವ ಸ್ಥಿತಿಯನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ಸಣ್ಣರಾಮ
(03 May 1954)

ಪ್ರೊ. ಸಣ್ಣರಾಮ ಅವರು 1954 ಮೇ 03 ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ಕೋಟಿಪುರ ತಾಂಡದಲ್ಲಿ ಜನಿಸಿದರು. ಅಕ್ಷರಲೋಕದ ಪರಿಚಯವಿಲ್ಲದ ಕುಟುಂಬದಿಂದ ಬಂದ ಸಣ್ಣರಾಮ, ಎಂ. ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದಲೂ, ಪಿಹೆಚ್.ಡಿ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ಪಡೆದರು. ಒಟ್ಟು 35 ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ಧಾರೆ. ಸುದೀರ್ಘ ಸೇವಾವಧಿಯಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಲ್ಲಿ ಕ್ರಿಯಾಶೀಲರಾಗಿದ್ದ ಸಣ್ಣರಾಮ ಅವರು 13 ಜನ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಹೆಚ್‍ಡಿ ಪದವಿ, 4 ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ ಮಾರ್ಗದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಣ್ಣರಾಮ ...

READ MORE

Reviews

ಸ್ವಾನುಭವನದ ಕಥನದಲ್ಲಿ ಸಮುದಾಯಕ ಚಿತ್ರ-ಜಯರಾಮ ಕಾರಂತ-ಉದಯವಾಣಿ

ತನ್ನ ಸುತ್ತ ಮುತ್ತಲ ಪರಿಸರದಲ್ಲಿ ನಡೆದಂತಹ ಪ್ರಕರಣಗಳನ್ನು ಸಾಹಿತ್ಯಿಕವಾಗಿ, ಅಲ್ಲದೆ ಜನರ ಭಾವಕ್ಕೆ ತಾಕುವಂತೆ ಕಟ್ಟಿಕೊಡುವುದು ಆತ್ಮಕಥೆ ಹಾಗೂ ಕಾದಂಬರಿಗಳಲ್ಲಿನ ಒಂದು ಕಥಾ ಶೈಲಿ. ಪ್ರೊ.ಸಣ್ಣರಾಮ ತಮ್ಮ ‘ನಾನೆಂಬುದು ನಾನಲ್ಲ’ ಎಂಬ ಆತ್ಮಕಥನದಲ್ಲಿ ಲಂಬಾಣಿ ಸಮುದಾಯದ ಕುರಿತು ಅವರು ಅನುಭವಿಸುತ್ತಿರುವ ಸಮಸ್ಯೆಗಳು, ಎದುರಿಸುತ್ತಿರುವ ಸವಾಲುಗಳನ್ನು ಕಟ್ಟಿಕೊಟ್ಟಿದ್ದಾರೆ. ಲೇಖಕರು ‘ಈ ಕೃತಿಯು ನನ್ನ ಆತ್ಮಚರಿತೆಯಾದರೂ, ಇದು ಒಂದು ಸಮಾಜದ ಚರಿತೆ, ಒಂದು ದೇಶದ ಚರಿತೆ’ ಎಂದು ಹೇಳಿಕೊಂಡಿದ್ದು, ಅವರ ಚಿಂತನೆಗಳನ್ನು ಮತ್ತು ಸಮುದಾಯದ ಬಗೆಗಿರುವ ಕಳವಳವನ್ನು ಈ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಲಂಬಾಣಿ ಸಮುದಾಯದ ಜೀವನ ಶೈಲಿಯನ್ನು ವಿವರಿಸುತ್ತಾ, ಆರ್ಥಿಕ ದುಃಸ್ಥಿತಿಯಿಂದಾಗಿ ಸಮುದಾಯ ಎದುರಿಸುತ್ತಿರುವ ನೋವುಗಳನ್ನೂ, ದುಡಿಮೆಯಿಲ್ಲದೆ ಕಳ್ಳಭಟ್ಟಿ ಸಾರಾಯಿ ವ್ಯಾಪಾರವನ್ನೇ ಜೀವನಾಧಾರವಾಗಿಸಿಕೊಂಡು ಪಡುತ್ತಿರುವ ಬವಣೆಗಳನ್ನು ಈ ಕೃತಿ ಸಾಧ್ಯಂತವಾಗಿ ಬಿಚ್ಚಿಟ್ಟಿದೆ. 

ಕೃಪೆ : ಪ್ರಜಾವಾಣಿ (2020 ಮಾರ್ಚಿ 15)

Related Books