ಯಕ್ಷಗಾನವನ್ನು ವಿಶ್ವಕ್ಕೆ ಪರಿಚಯಿಸಿದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ಆತ್ಮಕಥಾನಕ ಇದು. ಅಕ್ಷರಲೋಕ ಗೊತ್ತಿಲ್ಲದ ಸಾಮಾನ್ಯನೊಬ್ಬ ಕಲಾ ವಿದ್ವಾಂಸ ಹೇಗಾಗಬಲ್ಲ ಎಂಬುದನ್ನು ಕೃತಿ ಹೇಳುತ್ತದೆ. ಗದ್ದೆ ಕುಣಿಯಲ್ಲಿ ಮಲಗುತ್ತಿದ್ದ, ಎಲ್ಲಿ ಯಕ್ಷಗಾನ ನಡೆದರೂ ಅಲ್ಲಿಗೆ ಹಾರಿ ಹೋಗುತ್ತಿದ್ದ ಉಡುಪಿಯ ಹುಡುಗನೊಬ್ಬ ಯಕ್ಷ ಸಂಜೀವಿನಿಯಾದ ಕತೆ ಇಲ್ಲಿದೆ.
ಸಾಹಿತಿ ಶಿವರಾಮ ಕಾರಂತರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಅಪಾರ. ಅಂತಹ ಕೊಡುಗೆಗಳಲ್ಲಿ ಸಂಜೀವ ಸುವರ್ಣರೂ ಒಬ್ಬರು. ಕಾರಂತರನ್ನು ಸುವರ್ಣರು ಗುರುವೆಂದೇ ಪರಿಗಣಿಸಿದ್ದರು. ಈಗ ಸಂಜೀವರೇ ಅನೇಕರಿಗೆ ಗುರುಗಳು. ಅವರ ಶಿಷ್ಯರು ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡುತ್ತಿದ್ದಾರೆ. ಪೃಥ್ವಿರಾಜ ಕವತ್ತಾರು ಅವರ ಅನನ್ಯ ಬಗೆಯ ನಿರೂಪಣೆಯ ಕಾರಣಕ್ಕೂ ಕೃತಿ ಗಮನ ಸೆಳೆಯುತ್ತದೆ.
©2023 Book Brahma Private Limited.