ಹೆಸರಾಂತ ಪಂಜಾಬಿ ಕವಯತ್ರಿ ಅಮೃತಾ ಪ್ರೀತಂ ಅವರ ಆತ್ಮಕತೆ ’ರಸೀದಿ ತಿಕೀಟು’ನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದಾರೆ. ಇದು ಲಡಾಯಿ ಪ್ರಕಾಶನದಿಂದ ಮರುಮುದ್ರಣಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಮೃತಾರ ಕವಿತೆ- ಬರವಣಿಗೆಗಳು ಓದುಗರ ಪ್ರೀತಿಗೆ ಪಾತ್ರವಾಗಿರುವುದು ಅದರಲ್ಲಿ ಆರ್ದ್ರತೆಯ ಕಾರಣಕ್ಕಾಗಿ. ಅಮೃತಾ ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟಿದ್ದಾರೆ. ಅಮೃತಾ ಕಾವ್ಯ- ಬದುಕು ಎರಡನ್ನೂ ಅರಿಯಲು ಈ ಪುಸ್ತಕ ನೆರವಾಗುತ್ತದೆ. ಅಮೃತಾರ ಕವಿತೆಯೆಡೆಗೆ ಆಸಕ್ತಿ ಮೂಡುವುದಕ್ಕೆ ಕಾರಣವಾಗುತ್ತದೆ. ಈಗಾಗಲೇ ಕವಿತೆ ಓದಿದವರಿಗೆ ಈ ಕೃತಿಯು ಮತ್ತಷ್ಟು ಗಾಢವಾಗಿ ಅರ್ಥೈಸಿಕೊಳ್ಳಲು ಕಾರಣವಾಗುವುದರಲ್ಲಿ ಅನುಮಾನವಿಲ್ಲ.
©2023 Book Brahma Private Limited.