ರಸೀದಿ ತಿಕೀಟು

Author : ಹಸನ್ ನಯೀಂ ಸುರಕೋಡ

Pages 248

₹ 160.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಲಾಡ್ಜ್, ಗದಗ-582101
Phone: 9480286844

Synopsys

ಹೆಸರಾಂತ ಪಂಜಾಬಿ ಕವಯತ್ರಿ ಅಮೃತಾ ಪ್ರೀತಂ ಅವರ ಆತ್ಮಕತೆ ’ರಸೀದಿ ತಿಕೀಟು’ನ್ನು ಹಸನ್‌ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದಾರೆ. ಇದು ಲಡಾಯಿ ಪ್ರಕಾಶನದಿಂದ ಮರುಮುದ್ರಣಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಮೃತಾರ ಕವಿತೆ- ಬರವಣಿಗೆಗಳು ಓದುಗರ ಪ್ರೀತಿಗೆ ಪಾತ್ರವಾಗಿರುವುದು ಅದರಲ್ಲಿ ಆರ್ದ್ರತೆಯ ಕಾರಣಕ್ಕಾಗಿ. ಅಮೃತಾ ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟಿದ್ದಾರೆ. ಅಮೃತಾ ಕಾವ್ಯ- ಬದುಕು ಎರಡನ್ನೂ ಅರಿಯಲು ಈ ಪುಸ್ತಕ ನೆರವಾಗುತ್ತದೆ. ಅಮೃತಾರ ಕವಿತೆಯೆಡೆಗೆ ಆಸಕ್ತಿ ಮೂಡುವುದಕ್ಕೆ ಕಾರಣವಾಗುತ್ತದೆ. ಈಗಾಗಲೇ ಕವಿತೆ ಓದಿದವರಿಗೆ ಈ ಕೃತಿಯು ಮತ್ತಷ್ಟು ಗಾಢವಾಗಿ ಅರ್ಥೈಸಿಕೊಳ್ಳಲು ಕಾರಣವಾಗುವುದರಲ್ಲಿ ಅನುಮಾನವಿಲ್ಲ. 

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Reviews

ಹೊಸತು-2004- ನವೆಂಬರ್‌

ಕೋಮುಗಲಭೆಗಳ ಕಾಲದಲ್ಲಿ ಲೇಖನಿಯನ್ನು ಕೈಗೆತ್ತಿಕೊಂಡು ತನ್ನ ಸುತ್ತಲೂ ಮಾನವೀಯ ಕಕ್ಷೆ ನಿರ್ಮಿಸಿ ಕ್ರೌರ್ಯ ಹಿಂಸೆಯ ವಿರುದ್ಧ ದನಿಯೆತ್ತಿ ಕವನಗಳನ್ನು ಬರೆದು ಶಾಂತಿಗಾಗಿ ಹಂಬಲಿಸಿದ ಅಮೃತಾ ಪ್ರೀತಂ ಲೋಕಪ್ರಿಯ ಹೆಸರು. ಈ ಜ್ಞಾನಪೀಠ ಪುರಸ್ಕೃತ ಕವಯಿತ್ರಿಯ ಸಾಹಿತ್ಯ ದೇಶ-ವಿದೇಶಗಳಲ್ಲಿ ಬಹುಭಾಷೆಗಳಿಗೆ ಅನುವಾದಗೊಂಡಿದೆ. ಸ್ವಂತ ಬದುಕಿಗಿಂತ ಸಾಹಿತ್ಯದ ನಿರ್ಮಾಣಕ್ಕೆ ಹೆಚ್ಚಿನ ವೇಳೆ ವ್ಯಯಿಸಿದ ಅಮೃತಾ ಒಮ್ಮೆ ತಾನು ಆತ್ಮಚರಿತ್ರೆ ಬರೆಯುವೆ ಎಂದು ಕುಶ್‌ವಂತ್ ಸಿಂಗ್‌ ರೊಡನೆ ಅಂದರಂತೆ ! ತಕ್ಷಣ ಸರ್ದಾರ್ಜಿ “ನಿನ್ನಲ್ಲೇನಿದೆ ? ಆತ್ಮಚರಿತ್ರೆಗಾಗುವಷ್ಟು ? ಚಿಕ್ಕ ರಸೀದಿ ತಿಕೀಟು ಹಿಂಭಾಗ ಬರೆದರೂ ಮುಗಿಯುತ್ತೆ' ಎಂದರಂತೆ ! ಹೌದು; ಸಾಹಿತ್ಯ ಲೋಕಕ್ಕೆ ಪೂರ್ಣ ಅರ್ಪಿಸಿಕೊಂಡವರ ಖಾಸಗಿ ಬದುಕು ಚಿಕ್ಕದು. ಸ್ವಲ್ಪ ಉದ್ದ - ಅಗಲ - ವಿಸ್ತಾರ ಇರುವ ಈ ರಸೀದಿ ತಿಕೀಟು ಅಮೃತಾ ಆತ್ಮಚರಿತ್ರೆಯನ್ನು ತು೦ಬಿಕೊ೦ಡಿದೆ.

Related Books