ನೆನಪಿನ ಸುರುಳಿ ತೆರೆದಾಗ

Author : ಎಚ್. ಎಸ್. ದೊರೆಸ್ವಾಮಿ

Pages 161

₹ 113.00




Year of Publication: 2015
Published by: ಲಂಕೇಶ ಪ್ರಕಾಶನ
Address: ನಂ. 9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026676427

Synopsys

ಎಚ್.ಎಸ್. ದೊರೆಸ್ವಾಮಿ ಅವರು ಸ್ವಾತಂತ್ಯ್ರಯೋಧರು. ಹತ್ತು ಹಲವು ಪ್ರಗತಿಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದವರು. ಅನ್ಯಾಯಕ್ಕೆ ಪ್ರತಿಭಟನೆಯೇ ಮೊದಲ ಅಸ್ತ್ರ ಎಂಬುದು ಅವರ ನಿಲುವು. ತಮ್ಮ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಲೇ ಬಂದು, ಶೋಷಣೆಯನ್ನು ವಿರೋಧಿಸುವ ಮೂಲಕ ಹೋರಾಟಗಾರರಿಗೆ ಮಾದರಿಯಾದವರು. ಅವರು ತಮ್ಮ ಜೀವನವನ್ನು ಒಮ್ಮೆ ಹಿಂತಿರುಗಿ ನೋಡಿ ವಿಶ್ಲೇಷಿಸಿದ ಬರೆಹವಿದು.

About the Author

ಎಚ್. ಎಸ್. ದೊರೆಸ್ವಾಮಿ
(10 April 1918)

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೋರೆಸ್ವಾಮಿ. ಹಾರೋಹಳ್ಳಿಯಲ್ಲಿ ಜನಿಸಿದ ದೊರೆಸ್ವಾಮಿ ತಮ್ಮ 5ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅಜ್ಜನ ಬಳಿ ಬೆಳೆದ ಅವರು ಹಾರೋಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ ‘ಮೈ ಅರ್ಲಿ ಲೈಫ್’ ಪುಸ್ತಕವನ್ನು ಓದಿ ಅದರಿಂದ ಪ್ರಭಾವಿತರಾದ ದೊರೆಸ್ವಾಮಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿದರು. ಕಾಲೇಜು ಶಿಕ್ಷಣದ ಜೊತೆಗೆ ಸ್ವತಂತ್ರ್ಯ ಹೋರಾಟದಲ್ಲೂ ಭಾಗಿಯಾಗುತ್ತಿದ್ದ ದೊರೆಸ್ವಾಮಿ 1942ರ ಹೊತ್ತಿಗೆ ತಮ್ಮ ಬಿ.ಎಸ್.ಸಿ ಪೂರ್ಣಗೊಳಿಸಿ ಉಪನ್ಯಾಸಕ ವೃತ್ತಿ ಆರಂಭಿಸಿದರು. ಅದೇ ವರ್ಷ ...

READ MORE

Reviews

ಹೊಸತು-2004- ಮಾರ್ಚ್

ಸರಳ ಜೀವನವನ್ನು ಆಯ್ದುಕೊಂಡ ಹಿರಿಯ ಗಾಂಧೀವಾದಿ ಶ್ರೀ ಎಚ್. ಎಸ್. ದೊರೆಸ್ವಾಮಿ ಸೇವಾ ಮನೋಭಾವನೆಯ ನಿಸ್ವಾರ್ಥ ವ್ಯಕ್ತಿ, ಕ್ಷುದ್ರ ರಾಜಕಾರಣ – ಅಧಿಕಾರ ಲಾಲಸೆಯನ್ನು ಹತ್ತಿರವೂ ಸುಳಿಯದಂತೆ ದೂರಕ್ಕಟ್ಟಿದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಹಣವನ್ನು ಕೈಬಿಟ್ಟು ನಿರ್ಮಲ ಚಾರಿತ್ರ್ಯವನ್ನು ಗಳಿಸಿದವರು. ಬಾಲ್ಯದಿಂದಲೂ ನಡೆದ ಅನೇಕ ಘಟನೆಗಳಲ್ಲಿ ಸ್ಮರಿಸುತ್ತಾ ಹೋರಾಟ ಚಳುವಳಿಗಳಲ್ಲಿ ತಾವು ಸಾಗಿಬಂದ ರೀತಿಯನ್ನೂ ತಮ್ಮ ಒಡನಾಡಿ ಗಳನ್ನೂ ಪರಿಚಯಿಸಿದ್ದಾರೆ. ಸರಳತೆ, ಸಜ್ಜನಿಕೆ ಮತ್ತು ಆದರ್ಶದ ಪಾಠವೇ ಇಲ್ಲಿದೆ.

Related Books