ಅಲೈದೇವ್ರು

Author : ಹನುಮಂತ ಹಾಲಿಗೇರಿ

Pages 285

₹ 300.00




Year of Publication: 2021
Published by: ಅಲಿಸಿರಿ ಬುಕ್ಸ್,
Address: #429/2, ಪುಪ್ಪಗಿರಿ ನಗರ, ಕೆರೆಕೋಡಿ ಸರ್ಕಲ್ , ಹೊಸಕೆರೆಹಳ್ಳಿ, ಬೆಂಗಳೂರು-560085.
Phone: 9986302947

Synopsys

ಕಥೆಗಾರ ಹನುಮಂತ ಹಾಲಿಗೇರಿ ಅವರ ’ಅಲೈದೇವ್ರು’ ನಾಟಕ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಪೀರಭಾಷಾ ಅವರು ‘ಅಲೈದೇವ್ರು ನಾಟಕದ ಕಟ್ಟ ಕಡೆಯ ದೃಶ್ಯದಲ್ಲಿ ಆತ್ಯಂತಿಕ ಮಾರ್ಗವೆಂಬಂತೆ ಮೋನಪ್ಪಜ್ಜ “ತಾ ಇಲ್ಲಿ ಹಲಗಿ, ನಾವು ನಮ್ಮ ಕೆಲಸ ಮಾಡಾನು, ಅವ್ರು ಬೇಕಾದ್ರೆ ತಮ್ಮ ಕೆಲಸ ಮಾಡಿಕೊಳ್ಲಿ” ಎಂದು ಹಲಗೆ ಬಾರಿಸತೊಡಗುತ್ತಾನೆ. ಅಂತಿಮ ನಿರ್ಣಯವೆಂಬಂತಹ ಈ ಹಲಗೆ ಸದ್ದು, ಕೂಡಿದ ಸರ್ವದೈವವನ್ನೂ ಎಚ್ಚರಿಸುವ, “ಬೈಠಕ್-ಜಮಾತ್’ ನವರನ್ನು ಮೆಟ್ಟಿನಿಲ್ಲುವ, ಶಶಿಕಲಾ-ರಫೀಕರ’ ಪ್ರೇಮವನ್ನು ಲೋಕಕ್ಕೆ ಸಾರುವ ಸಂದೇಶವಾಗುತ್ತದೆ. ಕೊನೆಯ ಸನ್ನಿವೇಶದಲ್ಲಿ ಸಣ್ಣಗೆ ಹೊಮ್ಮುವ ಗಾಂಧೀ ‘ಸ್ವರ’ ಈ ನಾಟಕವು ಹೊಮ್ಮಿಸುವ ತಾತ್ವಿಕತೆಯನ್ನು ಸದ್ದಿಲ್ಲದೆ ಧ್ವನಿಸುತ್ತದೆ. ಇಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಈ ಬಗೆಯ ಮೌಲ್ಯವನ್ನು ತಂದುಕೊಟ್ಟಿರುವುದರಿಂದಲೇ ‘ಅಲೈದೇವ್ರು’ ನಾಟಕ ಈ ಕಾಲಕ್ಕೆ ಮಹತ್ವದ್ದೆನಿಸುತ್ತದೆ. 

About the Author

ಹನುಮಂತ ಹಾಲಿಗೇರಿ
(20 October 1980)

ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ...

READ MORE

Related Books