ರುಕ್ಮಿಣೀ ಸ್ವಯಂವರ

Author : ಬೆಳ್ಳಾವೆ ನರಹರಿಶಾಸ್ತ್ರಿ

Pages 123




Year of Publication: 1933
Published by: ಬೆಳ್ಳಾವೆ ಪುಸ್ತಕಾಲಯ
Address: ಬಳೇಪೇಟೆ, ಬೆಂಗಳೂರು ನಗರ

Synopsys

ಸುಧಾಕರ ಕರ್ಣಾಟಕ ಗ್ರಂಥಾವಳಿಯಡಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಚಿಸಿದ ನಾಟಕ -ರುಕ್ಮಿಣೀ ಸ್ವಯಂವರ. ಮಹಾಕವಿ ರುದ್ರಭಟ್ಟನು ಬರೆದ ಜಗನ್ನಾಥ ವಿಜಯ ಕೃತಿಯನ್ನು ಆಧರಿಸಿ ಅಲ್ಲಿಯ ರುಕ್ಮಿಣಿ ಸ್ವಯಂವರ ಪ್ರಸಂಗವನ್ನು ಇಲ್ಲಿ ನಾಟಕಕ್ಕೆ ರೂಪಾಂತರಿಸಲಾಗಿದೆ.

ಶ್ರೀಕೃಷ್ಣನ ಸ್ನೇಹಿತ ಮಕರಂದ, ಶ್ರೀಕೃಷ್ಣ, ಬಲರಾಮ, ನಾರದಾ, ಶಿಶುಪಾಲ, ಜರಾಸಂದ, ವಿದರ್ಭರಾಜನ ಪುತ್ರಿ ರುಕ್ಮಿಣಿ, ರಾಧೆ. ದುರ್ಯೋಧನ, ಕರ್ಣ ಇತ್ಯಾದಿ ಅರಸರು ಸೇರಿದಂತೆ ಪಾತ್ರಗಳಿವೆ. ಮಗದ ರಾಜ್ಯದ ದೊರೆ ಜರಾಸಂದನಲ್ಲಿಗೆ ನಾರದರ ಪ್ರವೇಶ ಆಗುವುದರೊಂದಿಗೆ ನಾಟಕ ಆರಂಭವಾಗುತ್ತದೆ. ಕೊನೆಗೆ ಶ್ರೀಕೃಷ್ಣನೊಂದಿಗೆ ರುಕ್ಮಿಣಿಯ ವಿವಾಹ ನೆರವೇರುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಉಪವನದಲ್ಲಿ ಸಖಿಯರೊಂದಿಗೆ ರುಕ್ಮಿಣಿಯ ಮಾತುಕತೆ, ಶಿಶುಪಾಲನ ಬಿಡಾರ, ಅರಣ್ಯಪ್ರಾಂತ್ಯದಲ್ಲಿಯ ಪರಶುರಾಮರ ಆಶ್ರಮ  ಪ್ರಸಂಗ-ಸನ್ನಿವೇಶಗಳು ಇತ್ಯಾದಿ ನಾಟಕದ ಗಂಭೀರತೆಗೆ ಕಾರಣವಾಗಿವೆ.

 

About the Author

ಬೆಳ್ಳಾವೆ ನರಹರಿಶಾಸ್ತ್ರಿ
(21 September 1882 - 21 June 1961)

ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್‌ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ...

READ MORE

Related Books