ಭಾಗೀರಥಿ

Author : ಸಿ.ಪಿ. ನಾಗರಾಜ

Pages 50

₹ 30.00




Published by: ನಾಗು ಸ್ಮಾರಕ ಪ್ರಕಾಶನ
Address: #75, 5ನೇ ಅಡ್ಡರಸ್ತೆ, ಎ ಬ್ಲಾಕ್‌, ಕೃಷ್ಣ ಗಾರ್ಡನ್‌, ಆರ್‌.ವಿ. ಕಾಲೇಜು ಪೋಸ್ಟ್‌, ಬೆಂಗಳೂರು
Phone: 9986347521

Synopsys

ಸಿ.ಪಿ.ನಾಗರಾಜ ಅವರ ನಾಟಕ ಸಂಕಲನ ಭಾಗೀರಥಿ. ಕೃತಿ ಬೆನ್ನುಡಿಯಲ್ಲಿ ಅನೇಕ ಸಾಹಿತಿಗಳು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಕೆರೆಗೆ ಹಾರ' ಎಂಬ ಜನಪದ ಕಾವ್ಯವನ್ನು ಬಹು ಸುಂದರವಾಗಿ ನಾಟಕಕ್ಕೆ ಪರಿವರ್ತಿಸಿದ್ದೀರಿ. -ತ.ಸು.ಶಾಮರಾಯ ನಾಟಕಕಾರರಿಗೆ ಇರುವ ಗ್ರಾಮಜೀವನದ ವಾಸ್ತವ್ಯದ ಅರಿವು, ಅದಕ್ಕನುಗುಣವಾದ ಗ್ರಾಮ್ಯ ಭಾಷೆಯ ಸಮರ್ಥವಾದ ಬಳಕೆ ಈ ನಾಟಕದ ಶಕ್ತಿಯನ್ನು ಹೆಚ್ಚಿಸಿದೆ. -ಪುಸ್ತಕ ಲೋಕ ಭಾವತಪ್ತವಾಗಬಹುದಾದಂಥ ಸನ್ನಿವೇಶಗಳುಳ್ಳ ಈ ಪುಟ್ಟ ನಾಟಕದಲ್ಲಿ ನಾಟಕಕಾರರು ಸೆಂಟಿಮೆಂಟಲ್ ಆಗಿಲ್ಲ. ಭಾವಪೂರ್ಣ ವಾತಾವರಣ ಸೃಷ್ಟಿಸುವಲ್ಲಿ ಗ್ರಾಮ್ಯ ಭಾಷೆಯನ್ನು ಲೇಖಕರು ಸಮರ್ಥವಾಗಿ ಹದವರಿತು ಪ್ರಯೋಗಿಸಿದ್ದಾರೆ. -ಸಂಕ್ರಮಣ

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books