ಬೆಟ್ಟದ ಮೇಲೊಂದು ಮನೆಯ ಮಾಡಿ

Author : ಸ್ವಾಮಿರಾವ್ ಕುಲಕರ್ಣಿ

Pages 96

₹ 80.00




Year of Publication: 2021
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಕಲ್ಬುರ್ಗಿ

Synopsys

ಡಾ. ಸ್ವಾಮಿರಾವ ಕುಲಕರ್ಣಿ ಅವರ "ಬೆಟ್ಟದ ಮೇಲೊಂದು ಮನೆಯ ಮಾಡಿ" ಎನ್ನುವ ನಾಟಕವನ್ನು ಅವಲೋಕಿಸಿದಾಗ ಇದು 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯ ಬದುಕು ಸಾಧನೆ ಸಾಹಿತ್ಯ ಆಧಾರಿತ ನಾಟಕ ವಾಗಿದ್ದು,ಉತ್ತರ ಕರ್ನಾಟಕದ ಭಾಷೆಯ ಶೈಲಿ ಈ ನಾಟಕದಲ್ಲಿ ಎದ್ದುಕಾಣುತ್ತದೆ.ಅಕ್ಕಮಹಾದೇವಿ ಯಲ್ಲಿನ ಭಕ್ತಿ ಅಧ್ಯಾತ್ಮಿಕ ಮಾರ್ಗವೇ ನಾಟಕದ ಕೇಂದ್ರಬಿಂದು.ಕೌಶಿಕ ರಾಜನು ಅಕ್ಕನ ಸೌಂದರ್ಯಕ್ಕೆ ಮೋಹಗೊಂಡು ಅವಳನ್ನು ತನ್ನ ವಳಾಗಿಸುವಲ್ಲಿ ಕಾಣುವ ಪ್ರಯತ್ನ ವಿಫಲತೆ ಸುಖದ ಕ್ಷಣಿಕತೆ, ಅರಿಷಡ್ವರ್ಗಗಳನ್ನು ನಿಗ್ರಸಿಕೊಂಡು ವೈರಾಗ್ಯದ ಗಟ್ಟಿ ನಿಲುವನ್ನು ತಾಳಿ ತನ್ನ ಆರಾಧ್ಯ ದೇವನಾದ ಚನ್ನ ಮಲ್ಲಿಕಾರ್ಜುನನ್ನು ನೆನೆಯುತ್ತ ಶಿವಲಿಂಗದಲ್ಲಿ ಇವಳ ಆತ್ಮಲಿಂಗ ಆಗುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಾಟಕದಲ್ಲಿ ರಾಜನ ಅಧಿಕಾರಿ ಸಾಹಿತ್ಯ ಭಕ್ತಿ ವೈರಾಗ್ಯ ಅಧ್ಯಾತ್ಮ ಮಾರ್ಗ ಅರ್ಥಪೂರ್ಣವಾಗಿ ಮೂಡಿಬಂದಿದೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 96 ಪುಟಗಳಿದ್ದು 80 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books