ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ

Author : ಅ.ನಾ. ರಾವ್ ಜಾದವ್

Pages 112

₹ 63.00




Year of Publication: 2014
Published by: ನವಕರ್ನಾಟಕ ಪಬ್ಲಿಕೇಷನ್‌
Address: ದೇವನಗರ ,ಕೆಂಪೇಗೌಡ ರೋಡ್‌, ಬೆಂಗಳೂರು 560009
Phone: 7353530805

Synopsys

ತೇಜಸ್ವಿ ಅವರ ಕರ್ವಾಲೊ ಕೃತಿಯನ್ನು ಅ.ನಾ.ರಾವ್‌ ಜಾದವ್‌ ಅವರ ನಾಟಕ ಕೃತಿಯಾಗಿ ರೂಪಂತರಿಸಿದ್ದಾರೆ. ಕಾದಂಬರಿಯ ಲೇಖಕರೇ ನಾಟಕದ ಪಾತ್ರವಾಗಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಅವರ ಕುಟುಂಬದ ಸದಸ್ಯರು, ಜೀವಿವಿಜ್ಞಾನಿ ಕರ್ವಾಲೊ, ಮಂದಣ್ಣ, ಲಕ್ಷ್ಮಣ, ಪ್ಯಾರಾ, ಪ್ರಭಾಕರ, ನಾರ್ವೆ ರಾಮಯ್ಯ, ಕರಿಯ ಮತ್ತು ಎಂಗ್ಟ ಹೀಗೆ ನಾಟಕದ ಎಲ್ಲ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

About the Author

ಅ.ನಾ. ರಾವ್ ಜಾದವ್

 ನಟನೆ, ನಾಟಕ ರಚನೆ, ನಿರ್ದೇಶನ, ಚಾರಣ, ಛಾಯಾಗ್ರಹಣ, ಬರವಣಿಗೆ, ಪಕ್ಷಿವೀಕ್ಷಣೆ, ಮರ-ಗಿಡಗಳ ಅಧ್ಯಯನ... ಹೀಗೆ ಅನೇಕ ಕ್ಷೇತ್ರಗಳನ್ನು ಹಚ್ಚಿಕೊಂಡವರು-ಅ ನಾ ರಾವ್ ಜಾದವ್. ಅನೇಕ ನಾಟಕಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಿರ್ದೆಶಿಸಿದ್ದಾರೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ‘ಕರ್ವಾಲೊ’ ಕೃತಿಗಳನ್ನಾಧರಿಸಿ ನಾಟಕಗಳನ್ನು ರಚಿಸಿದ್ದಾರೆ. ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು?’ ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ‘ಹಿಮಗಿರಿಯ ಕಣಿವೆಗಳಲ್ಲಿ’ ಇವರ ಪ್ರಕಟಗೊಂಡಿರುವ ಚಾರಣ ಕಥನ ಕೃತಿ. ‘ಪ್ರಕೃತಿ-ಪರಂಪರೆ’ ಕುರಿತಾದ ಇವರ ಅಸಂಖ್ಯ ಚಿತ್ರ-ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಅನೇಕ ಹನಿಗವನಗಳೂ ಪ್ರಕಟಗೊಂಡಿವೆ. ...

READ MORE

Related Books