ಹೊಸಬಳು ಈ ಸದಾರಮೆ

Author : ಎನ್.ಸಿ. ಮಹೇಶ್

Pages 204

₹ 210.00




Year of Publication: 2022
Published by: ಪ್ರಗತಿ ಪ್ರಕಾಶನ
Address: ಜಯನಗರ, ವಿಶ್ವವಿದ್ಯಾಲಯ ರಸ್ತೆ , ಕಲಬುರಗಿ\n
Phone: 9449619162

Synopsys

‘ಹೊಸಬಳು ಈ ಸದಾರಮೆ’ ಎನ್.ಸಿ. ಮಹೇಶ್ ಅವರ ಮೂರು ನಾಟಕಗಳ ಸಂಕಲನವಾಗಿದೆ. ಲೇಖಕ ನಾಟಕದ ಕುರಿತು ಕೆಲವೊಂದು ವಿಚಾರವನ್ನು ಹೀಗೆ ಹೇಳುತ್ತಾರೆ; ರಂಗದ ಕಾಯಕ ಎನ್ನುವುದೊಂದು ವಿಶಿಷ್ಟ ಬಗೆಯ ಸೆಳವು; ಏರುತ್ತಲೇ ಹೋಗುವ ನಶೆಯ ಹಾಗೆ. ಇದರ ಸೆಳವಿಗೆ ಸಿಕ್ಕವರಿಗಷ್ಟೇ ಇದರ ಅಂದ ಚೆಂದ, ಬೆರಗು ಮತ್ತು ಕಟು ವಾಸ್ತವಗಳು ಅರಿವಿಗೆ ನಿಲುಕಿರುತ್ತವೆ. ಆದರೆ ಹೊರಗಿನಿಂದ ವಿಚಿತ್ರವಾಗಿ ಚಿತ್ರತವಾಗುತ್ತಿರುತ್ತದೆ. ಆ ಎಲ್ಲರಿಗೆ ರಂಗದ ಮೇಲಿನ ಭವ್ಯತೆ ಕಾಣುತ್ತಿರುತ್ತದೆಯೇ ಹೊರತು ಅದರ ಹಿಂದಿನ ಕಟ್ಟುಪಾಡುಗಳಲ್ಲ. ಇನ್ನು ನಾನು ಇಲ್ಲಿ ‘ಕಟ್ಟುಪಾಡು’ ಎಂದು ಕರೆದಿರುವುದಕ್ಕೆ ಕಾರಣಗಳಿವೆ. ಎಂದಿನಿಂದಲೂ ಅಷ್ಟೇ, ರಂಗದಲ್ಲಿ ಹಲವರು ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾನು ಆರಿಸಿಕೊಂಡಿದ್ದು ನಾಟಕ ‘ಬರೆಯುವ’ ಕಾಯಕ. ಇದರ ಸೆಳವು ಹೇಗೆ ಅಂದರೆ ತೆಪ್ಪದಲ್ಲಿ ಕೂತವನು ಅನಿವಾರ್ಯವಾಗಿ ಹುಟ್ಟುಹಾಕುತ್ತಲೇ ಸಾಗಬೇಕು, ಇಲ್ಲದಿದ್ದರೆ ಗತ್ಯಂತರವಿಲ್ಲ ಎನ್ನುವ ಬಗೆಯದು. ನಾಟಕವೊಂದು ರಂಗದ ಮೇಲೆ ಯಶಸ್ವಿಯಾದರೆ ಮತ್ತೆ ಮತ್ತೆ ನಾಟಕ ಬರೆಯುವ ಉಮೇದು ಹುಟ್ಟುತ್ತದೆ.

About the Author

ಎನ್.ಸಿ. ಮಹೇಶ್

ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದಲ್ಲಿರುವ ಬೆಣಚನಹಳ್ಳಿಯಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಂತರ ಕೆಲಕಾಲ ಕನ್ನಡ ಪ್ರಭ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ. ಮೇಷ್ಟ್ರು ವೃತ್ತಿ ಬಗ್ಗೆ ಮೊದಲಿಂದ ತೀವ್ರತರ ಒಲವು. ಪರಿಣಾಮವಾಗಿ ಕೆಲ ಕಾಲ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಣೆ. ಪ್ರಸ್ತುತ  ಸುರಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನ ಕೆಲಸ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ. ‘ಬೆಳಕು ಸದ್ದುಗಳನ್ನು ಮೀರಿ’ , ‘ ಸರಸ್ವತಿ ಅಕಾಡಮಿ’- ಕಥಾಸಂಕಲನಗಳು. ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ – ಕಾದಂಬರಿ. ‘ ...

READ MORE

Related Books