ಲೇಖಕ ಟಿ.ಪಿ. ಕೈಲಾಸಂ ಅವರು ಬರೆದ ಏಕಾಂಕ ನಾಟಕ-ಸೀಕರ್ಣೆ ಸಾವಿತ್ರಿ. ಈ ಕೃತಿಯನ್ನು ಬಿ.ಎಸ್. ರಾಮರಾವ್ ಅವರು ಸಂಪಾದಿಸಿದ್ದಾರೆ. 1943, 1945 ಹಾಗೂ 1968 ರಲ್ಲಿ ಹೀಗೆ ಕೃತಿಯು ಆವೃತ್ತಿಗಳನ್ನು ಕಂಡಿದೆ. ಲೇಖಕರ ಪ್ರಕಾರ ಈ ನಾಟಕವು ಏಕಾಂಕ, ಏಕ ರಂಗ, ಏಕಪಾತ್ರ ರೂಪಕ. ಹೀಗೆ ನಾಟಕಗಳ ಪ್ರಯೋಗಗಳಲ್ಲೇ ವಿನೂತನತೆಯನ್ನು ಕಾಣುವ ಹಂಬಲವನ್ನು ಇಲ್ಲಿ ಕಾಣಬಹುದು. ಜಿ.ಪಿ. ರಾಜರತ್ನಂ ಅವರು ಸೀಕರ್ಣೆ ಸಾವಿತ್ರಿ ನಾಟಕವನ್ನು‘ಕೈಲಾಸ ಕಥನ’ ಕೃತಿಯಲ್ಲಿ ಸಂಪಾದಿಸಿದ್ದರು.
©2024 Book Brahma Private Limited.